लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಅರ್ಚಕರನ್ನು ವಿರೋಧಿಗಳು ವಜಾಗೊಳಿಸಬೇಕೆಂದು ಮಾಡುತ್ತಿದ್ದಾರಂತೆ avintvcom

1 min read

ದಾವಣಗೆರೆ

ಸ್ಲಗ್- ದೇವಸ್ಥಾನದಿಂದ ಅರ್ಚಕರನ್ನು ಹೋರ ಹಾಕಲು ನಡೆಯುತ್ತಿದ್ದೇಯಾ ಪಿತೂರಿ..?……ಹಲವು ವರ್ಷಗಳಿಂದ ದೇವಸ್ಥಾನದಲ್ಕಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಅರ್ಚಕರು….

ಹೆಡ್ ಲೈನ್ – ಬೀರಲಿಂಗೇಶ್ವರ ದೇವಸ್ಥಾನದಿಂದ ಅರ್ಚಕರನ್ನು ಹೋರ ಹಾಕಲು‌ನಡೆಯುತ್ತಿದ್ದೇಯಾ ಪ್ಲ್ಯಾನ್…ಸಂಶಯಕ್ಕೆ ಎಡೆ ಮಾಡಕೊಟ್ಟ ಹಲವರ ನಡೆ…

ಆ್ಯಂಕರ್- ಅದೂ ಅವರ ಪಿತ್ರಾರ್ಜಿತ ಆಸ್ತಿ. ಅದಕ್ಕೆ ದಾಖಲೆಯು ಕೂಡಾ ಇವೆ. ಅಲ್ಲದೆ ಅದೇ ಜಾಗದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಅವರು ಅರ್ಚಕರಾಗಿಯು ಕಾರ್ಯ ಮಾಡುತ್ತಿದ್ದಾರೆ. ಆದರೆ ಹಿಗಿದ್ದಾಗಲೂ ಅಲ್ಲಿಯ ಕೆಲವು ವಿರೋಧಿಗಳು ಅನಬೇಕು ಅಥವಾ ದುರುದೋಶಕೊರರು ಅನಬೇಕು ಗೊತ್ತಿಲ್ಲಾ. ಅಂತವರು ಈಗ ಬಿ ಜಿ ಲಿಂಗೇಶನನ್ನು ಅವರ ಜಾಗದಲ್ಲಿರೋ ದೇವಸ್ಥಾನದ ಅರ್ಚಕನ ಸ್ಥಾನದಿಂದ ಕೆಲಗೆ ಇಳಿಸಲು ಪ್ರಯತ್ನಿಸುತ್ತಿದ್ದಾರ ಅಂತೆ. ಒಟ್ಟು ನಾಲ್ಕು ಎಕರೆ ಹದಿನೇಳು ಗುಂಟಾ ಜಾಗವಿದ್ದು, ನಗರದ ಹೈಸ್ಕೂಲ್ ಮೈದಾನ ಪಕ್ಕದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕರಾಗಿ ಬಿಜಿ ಲಿಂಗೇಶ್ವರವರು ಕಾರ್ಯ ಮಾಡುತ್ತಿದ್ದಾರೆ. ದೇವಸ್ಥಾನದ ಕಮಿಟಿಯವರು ಅಂತ ಹೇಳಿಕೊಂಡು  ಕೆಲ ವ್ಯಕ್ತಿಗಳಿಂದ ಹಾಗೂ ಅವರ ಸಹಚರರಿಂದ ಬಿ ಜಿ ಲಿಂಗೇಶ್ ಅವರನ್ನು ಅರ್ಚಕರ ಸ್ಥಾನದಿಂದ ವಜಾಗೊಳಿಸಬೇಕೆಂದು ಕುತಂತ್ರ ಮಾಡುತ್ತಿದ್ದಾರಂತೆ ಹಾಗೂ ದೇವಸ್ಥಾನದಿಂದ ಅರ್ಚಕರನ್ನು ಹಾಗೂ ಅರ್ಚಕರ ಕುಟುಂಬಸ್ಥರನ್ನು ಎಲ್ಲರನ್ನು ದೇವಸ್ಥಾನದ ಆವರಣದಿಂದ ಹೊರಗೆ ಹಾಕಬೇಕೆಂದು ಸಂಚು ರೂಪಿಸಿದಾರಂತೆ. ಬೆಳ್ಳಂಬೆಳಗ್ಗೆ 4:00 ಸುಮಾರು  ದಬ್ಬಾಳಿಕೆಯಿಂದ ಹೊರಗೆ ಹಾಕಬೇಕೆಂಬ  ಪಿತೂರಿ ನಡೆಯುತ್ತಿದೆ ಇದಕ್ಕೆ ಸರಕಾರಿ ಅಧಿಕಾರಿಗಳು ಮುಂದೆ ಬಂದು ಈ ವಂಶಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು ಸ್ಥಳಿಯ ಪ್ರಜ್ಞಾವಂತ ನಾಗರಿಕರು ಕೇಳಿಕೊಳ್ಳುತ್ತಿದ್ದಾರೆ..

About Author