लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ನೂತನ ಶಾಸಕರ ಕಾರ್ಯಲಯ ಉದ್ಘಾಟನೆ ಮಾಡಲಾಯಿತು avintvcom

1 min read

ಗ್:- ನೂತನ ಶಾಸಕರ ಕಾರ್ಯಲಯ ಉದ್ಘಾಟನಾ ಸಮಾರಂಭ ಸ್ಥಳ:- ಸುಲೇಪೇಟ ವರದಿ:- ಶಿವಕುಮಾರ್ ತಳವಾರ

ಆ್ಯಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ನೂತನ ಶಾಸಕರ ಕಾರ್ಯಲಯ ಉದ್ಘಾಟನೆ ಮಾಡಲಾಯಿತು

ಹೌದು

ಈಶನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಹಾಗೂ ಸೇಡಂ ಕ್ಷೇತ್ರದ ಶಾಸಕರಾದ ಶ್ರೀ ರಾಜಕುಮಾರ ಪಾಟಿಲ್ ರವರು ಸುಲೇಪೇಟ ಗ್ರಾಮಕ್ಕೆ ಆಗಮಿಸಿ ಗ್ರಾಮದಲ್ಲಿ ಬರುವ ಬಡಾವಣೆಗೆ ಜನರ ಜೊತೆ ತೆರಳಿ ಬಡವಣೆಯಲ್ಲಿನ ಸಮಸ್ಯೆಗಳನ್ನು ಹಾಗೂ ಇನ್ನೂ ನೆನೆಗೂದಿಗೆ ಬಿದ್ದ ಕೆಲಸ ಕಾರ್ಯಗಳನ್ನು ಕುರಿತು ಜನರಲ್ಲಿ ಮಾಹಿತಿ ಪಡೆದರು ನಂತರ

ಚಿಂಚೋಳಿ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯತಿ ಹಳ್ಳಿಗಳ ಜನರ ಕೆಲಸ ಕಾರ್ಯಗಳ ಅನೂಕೂಲಕ್ಕಾಗಿ ಸುಲೇಪೇಟ ಪಟ್ಟಣದಲ್ಲಿ ನೂತನ ಶಾಸಕರ ಕಾರ್ಯಲಯ ರಿಬ್ಬನ್ ಕಟ್ ಮಾಡುವದರ ಮೂಲಕ ಉದ್ಘಾಟನೆ ಮಾಡಲಾಯಿತು

ತದ ನಂತರ  ಪಕ್ಷದ ಮಂಡಲಾಧ್ಯಕ್ಷರು ಜಿಲ್ಲಾ ಪಂಚಾಯತ ಸದಸ್ಯರು ಮುಖಂಡರು ಕಾರ್ಯಕರ್ತರು ಶಾಸಕರಿಗೆ ಹೂವಿನ ಹಾರ ಸಾಲು ಹೊದಿಸಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಸೇಡಂ ಕ್ಷೇತ್ರದ ಶಾಸಕರು ಹಾಗೂ ಈಶನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಶ್ರೀ ರಾಜಕುಮಾರ ಪಾಟಿಲ್ ಮಾಧ್ಯಮದವರ ಜೊತೆ ಮಾತನಾಡಿ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಸೇಡಂ ಗೆ ಬರಲು ತೊಂದರೆಯಾಗುತ್ತಿದ್ದು ಎಂದು ಸಾಕಷ್ಟು ಜನರು ಹೆಳಿದರು ಹಾಗಾಗಿ ಸುಲೇಪೇಟ ಗ್ರಾಮದಲ್ಲಿ ಶಾಸಕರ ಕಛೆರಿ ಉದ್ಘಾಟನೆ ಮಾಡಲಾಗಿದೆ

ಸುಲೇಪೇಟ ಗ್ರಾಮದಲ್ಲಿ ಮಾಡಬಹುದಾಂತಹ ಯಾವ ಯಾವ ಕಾಮಗಾರಿಗಳು ಬಾಕಿ ಇವೆ ಇನ್ನೂ ಯಾವ ಕಾಮಗಾರಿಗಳನ್ನು ಮಾಡಬೇಕು ಎಂದು ವಿಕ್ಷಣೆ ಮಾಡಿ ಬಂದಿದ್ದೆನೆ ಈಗಾಗಲೇ ಸನ್ಮಾನ್ಯ ಶ್ರೀ ಪ್ರಧಾನ ಮಂತ್ರಿಗಳ ಕೃಷಿ ಸಮ್ಮಾನ ಯೋಜನೆಯಲ್ಲಿ ಈ ಭಾಗದ ಸುಮಾರು ಇಪ್ಪತ್ತೂ ಸಾವಿರ ರೈತ ಕುಟುಂಬಗಳಿಗೆ ನಮ್ಮ ಸೇಡಂ ವಿಧಾನ ಕ್ಷೇತ್ರದ ಇಪ್ಪತ್ತು ಸಾವಿರ ಕುಟುಂಬಗಳಿಗೆ ಪ್ರತಿ ರೈತ ಕುಟುಂಬಕ್ಕೆ ಹತ್ತೂ ಸಾವಿರ ರೂಪಾಯಿ ಕೇಂದ್ರ ಸರಕಾರದ್ದು ನಾಲ್ಕೂ ರೂಪಾಯಿ ರಾಜ್ಯ ಸರಕಾರದ್ದು ಈಗಾಗಲೇ ಇಪ್ಪತ್ತೂ ಕೊಟಿ ಬಿಡುಗಡೆಯಾಗಿದೆ ಎಂದು ಹೆಳಿದರು

ಈ ಸಂದರ್ಭದಲ್ಲಿ ಮಹೇಶ ಬೆಮಳಗಿ, ಶಿವಶರಣಪ್ಪ ಕುಂಬಾರ, ಶಿವಕುಮಾರ ಚಾಂಗಲೇರ, ಶರಣು ಸೊಂತ ,ಅತೀಶ ಪವಾರ್, ಮಲ್ಲಿಕಾರ್ಜುನ ಪಾಳೆದ್, ವಿಜಯಕುಮಾರ ಮೇದಾರ್, ದಯಾನಂದ ರೆಮಣಿ,ಶಾಸ್ತ್ರಿ ಸಾಲಿಮಠ,ನಾಗೇಶ ತೆಲ್ಕೂರ್,ವೈಜಿನ್ನಾಥ ದಾದಿ,ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಪಾಲಗೊಂಡಿದ್ದರು

About Author