“ಮಾಜಿ ಸಚಿವರಿಗೆ ಕೊಲೆ ಬೆದರಿಕೆ : ಗಣ ಬಿಡಿಸಿದ ಎಸ್.ಡಿ.ಎಂ.ಸಿ., ಸರಿಯಾದ ನಿರ್ಧಾರ ತೆಗೆದುಕೊಂಡ ಸರ್ಕಾರ.”
1 min read
ಮಾಜಿ ಸಚಿವರಿಗೆ ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕಿದ ಮೂಡಿಗೆರೆ ತಾಲ್ಲೂಕಿನ,ಬೆಟ್ಟಗೆರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲಲಿತಮ್ಮ ಅವರಿಗೆ ಮೈ ಮೇಲೆ ಬಂದ ದೆವ್ವವನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರು ಮತ್ತು ಗ್ರಾಮಸ್ಥರು ಬಿಡಿಸಿದ್ದಾರೆ.

ಮುಖ್ಯ ಶಿಕ್ಷಕಿ ಲಲಿತಮ್ಮ
ಕೆಲವು ದಿನಗಳ ಹಿಂದೆ ಬೆಟ್ಟಗೆರೆ ಗ್ರಾಮದ ಶ್ರೀಮತಿ ನಿಂಗಮ್ಮ ಬೋಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಲಲಿತಮ್ಮ ಶಾಲೆಯ ಮಕ್ಕಳ ಅಕ್ಕಿ,ಗೋಧಿ,ಸಕ್ಕರೆ ಹಾಗೂ ಕೆಲವು ಶಾಲಾಭಿವೃದ್ಧಿಯ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು ಸರಿಯಷ್ಟೇ
ಅದನ್ನು ತನಿಖೆ ಮಾಡಲು ಎಸ್. ಡಿ .ಎಂ. ಸಿ. ಅಧ್ಯಕ್ಷರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಕೇಳಿದ್ದಾರೆ, ಅದಕ್ಕೆ ಸ್ಪಂದಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಖೆ ಮಾಡಿದಾಗ ಶಿಕ್ಷಕಿ ಲಲಿತಮ್ಮ ಆಹಾರ ಪದಾರ್ಥಗಳನ್ನು ಹಾಗೂ ಹಣವನ್ನು ದುರುಪಯೋಗ ಮಾಡಿರುವುದು ಬೆಳಕಿಗೆ ಬಂದಿದೆ.
ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ ಅವರಿಗೆ ಧಮ್ಕಿ ಹಾಕಿದ ವಿಡಿಯೋ.👇👇👇
ಮುಖ್ಯ ಶಿಕ್ಷಕಿ ಲಲಿತಮ್ಮ ತಮ್ಮ ಮೈ ಮೇಲೆ ಏನೊ ದೆವ್ವ ಬಂದಹಾಗೆ ನಟಿಸಿ ಮಾಜ ಸಚಿವರು ಹಾಗೂ ಶಾಲಾ ದಾನಿಗಳಾದ ಬಿ.ಬಿ. ನಿಂಗಯ್ಯ ಅವರಿಗೆ ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕಿದ ಮುಖ್ಯ ಶಿಕ್ಷಕಿ ಲಲಿತಮ್ಮ ಅವರನ್ನು ಶಿಕ್ಷಣ ಇಲಾಖೆಯು ಸೇವೆಯಿಂದ ಅಮಾನತುಗೊಳಿಸಿದೆ.
ಶಿಕ್ಷಣ ಇಲಾಖೆಯ ಈ ಕಾರ್ಯವನ್ನು ಬೆಟ್ಟಗೆರೆಯ ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಶ್ಲಾಘಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




