“ಭೂಗಳ್ಳರ ರಕ್ಷಣೆಗೆ ಕಾಂಗ್ರೆಸ್ ನಿಯೋಗ : ಯು.ಬಿ.ಮಂಜಯ್ಯ.”
1 min read
ರಾಜ್ಯ ಸರ್ಕಾರ ಮೂಡಿಗೆರೆ ಮತ್ತು ತರೀಕೆರೆಯಲ್ಲಿ ನಡೆದಿರುವ ಸರ್ಕಾರಿ ಭೂಮಿಯನ್ನು ಕಾನೂನುಬಾಹಿರವಾಗಿ ಅನರ್ಹ ಭೂಮಾಲಿಕರಿಗೆ ಮತ್ತು ರಾಜಕಾರಣಿಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದರ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದು,ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳು ರಾಜಕಾರಣಿಗಳು ಮತ್ತು ಭೂ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಸ್ವಾಗತ.ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಂದಾಯ ಮಂತ್ರಿ ಕೃಷ್ಣ ಭೈರೇಗೌಡರ ಸರ್ಕಾರಿ ಭೂಮಿ ಉಳಿಸಿಕೊಳ್ಳುವ ಕಾಳಜಿಯಿಂದಾಗಿ ಈ ತನಿಖೆ ನಡೆಯುತ್ತಿದ್ದು ಅಧಿಕಾರಿಗಳಿಗೆ ಮತ್ತು ಭೂಗಳ್ಳರಿಗೆ ನಡುಕ ಹುಟ್ಟಿಸಿದ್ದು, ದುರಾದೃಷ್ಟವಶಾತ್ ಕಾಂಗ್ರೆಸ್ ಪಕ್ಷದ ಚಿಕ್ಕಮಗಳೂರು ಜಿಲ್ಲೆಯ ಎಂ.ಎಲ್.ಎ.ಗಳು ಮತ್ತು ಮಾಜಿ ಮಂತ್ರಿಗಳು ಈ ಅಕ್ರಮದ ಪರವಾಗಿ ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗಿದ್ದು, ಭೂಗಳ್ಳರ ರಕ್ಷಣೆಗೆ ಮನವಿ ಮಾಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಮೂಡಿಗೆರೆ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದರು.

ಪರಿಶಿಷ್ಟ ಜಾತಿ ವರ್ಗ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜಾತಿಯ ಬಡವರಿಗೆ ಸಂವಿಧಾನ ಬದ್ಧವಾಗಿ ಹಂಚಬೇಕಾಗಿದ್ದ ಸರ್ಕಾರಿ ಭೂಮಿಯನ್ನು ಅಕ್ರಮ ಸಕ್ರಮ ಸಮಿತಿಯವರು ಅಧಿಕಾರಿಗಳು ಸೇರಿಕೊಂಡು ಭೂಗಳ್ಳರಿಗೆ ಮಾರಾಟ ಮಾಡಿಕೊಂಡಿರುತ್ತಾರೆ. ಬಡವರಿಗೆ ಎರಡು ಗುಂಟೆ ಜಾಗವನ್ನು ಮನೆ ಕಟ್ಟಿಕೊಳ್ಳಲು ಕೊಡಲಾಗದ ಸರ್ಕಾರ ಭೂಗಳ್ಳರಿಗೆ ಸಾವಿರಾರು ಎಕರೆ ಜಮೀನನ್ನು ಮಂಜೂರು ಮಾಡಿರುವುದು ಆಕ್ರಮ ಮುಖ್ಯಮಂತ್ರಿಗಳ ಕೈ ಕಟ್ಟಿ ಹಾಕಲು ಹೋಗಿದ್ದ ನಿಯೋಗದಲ್ಲಿ ಕಾನೂನು ಪದವಿಧರೆಯಾದ ಮೂಡಿಗೆರೆ ಶಾಸಕಿ ನಯನ ಮೋಟಮ್ಮನವರು ಇದ್ದದ್ದು ತಮಗೆ ಮತ ಹಾಕಿದ ಅತಿ ಹೆಚ್ಚು ಬಡವರಿರುವ ದಲಿತ ಮತ್ತು ಅಲ್ಪಸಂಖ್ಯಾತರಿಗೆ ಮಾಡಿದ ದ್ರೋಹ ಆಗಿದೆ. ಹಿಂದಿನ ಶಾಸಕರು ತಮ್ಮ ಅಸಮರ್ಥತೆಯಿಂದ ಶ್ರೀಮಂತ ಭೂಗಳ್ಳರ ಪರವಾಗಿದ್ದರು. ಆದರೆ ಇಂದಿನ ಶಾಸಕರು ಹಿಂದಿನ ಶಾಸಕರು ಮತ್ತು ಅವರ ಹಿಂಬಾಲಕರು ಮಾಡಿದ ಅಕ್ರಮವನ್ನು ಸಕ್ರಮ ಮಾಡಲು ಹೊರಟಿರುವುದು ನೋಡಿದರೆ ಹೊಸದಾಗಿ ಕಮಿಷನ್ ಪಡೆಯುವ ಆಲೋಚನೆ ಇರಬಹುದೇನೋ ಅನಿಸುತ್ತದೆ. ಹಿಂದೆ ಅರ್ಜಿ ಕೊಡಲಿ ಕೊಡದಿರಲಿ, ಒಂದು ಕುಟುಂಬದಲ್ಲಿ 5 ಎಕರೆಗಿಂತ ಹೆಚ್ಚು ಜಮೀನಿದ್ದವರಿಗೆ ಹೊಸದಾಗಿ ಜಮೀನು ಮಂಜೂರು ಮಾಡಬಾರದು ಎಂಬ ಕಾನೂನು ಮೀರಿ ದುಡ್ಡು ಕೊಟ್ಟವರಿಗೆ, ನೂರಾರು ಎಕ್ರೆ ಭೂಮಿ ಇದ್ದರೂ ಹೊಸದಾಗಿ ಭೂಮಿ ಹಂಚಲಾಗಿದೆ. ಇದನ್ನು ತಿಳಿದುಕೊಳ್ಳಲು ಅಮೆರಿಕಾದ ಯುನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆಯಬೇಕಾಗಿಲ್ಲ. ಆ ಜಮೀನೆಲ್ಲವೂ ಸಂವಿಧಾನ ಬದ್ಧವಾಗಿ ಬಡ ಜನರಿಗೆ ಹಂಚಬೇಕಾಗಿದ್ದ ಜಮೀನು ಎನ್ನುವುದು ಕನಿಷ್ಠ ಸಾಮಾನ್ಯ ಜ್ಞಾನವಿದ್ದವರಿಗೂ ಅರ್ಥವಾಗುತ್ತದೆ. ನಯನ ಮೋಟಮ್ಮನವರಿಗೆ ಯಾಕೆ ಅರ್ಥ ಆಗುವುದಿಲ್ಲ ಮೋಟಮ್ಮ ಮತ್ತು ಬಿ.ಬಿ.ನಿಂಗಯ್ಯನವರಿಗೂ ಯಾಕೆ ಅರ್ಥವಾಗುವುದಿಲ್ಲ. ಹಣದ ಮತ್ತು ವೋಟಿನ ಪ್ರಭಾವಳಿಗೆ ಇವರು ಒಳಗಾಗಿ ಬಡ ಜನರಿಗೆ ಅನ್ಯಾಯ ಮಾಡುತ್ತಿರುವುದು ಅಂಬೇಡ್ಕರ್ ಮತ್ತು ಸಂವಿಧಾನ ಎರಡಕ್ಕೂ,ಮಾಡುತ್ತಿರುವ ಅವಮಾನವಾಗಿದೆ ಎಂದರು.
🎙️ವರದಿ🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




