AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 12/09/2023 ಮಂಗಳವಾರದಂದು ಬೆಳಗ್ಗೆ 7:30 ಕ್ಕೆ ಏಮ್ ಫಾರ್ ಸೇವಾ ಆಶ್ರಮ ಹಾಂದಿಯಲ್ಲಿ ಜೆಸಿಐ ಮೂಡಿಗೆರೆ ವತಿಯಿಂದ ಮಕ್ಕಳಿಗೆ ಉಪಹಾರ ವಿತರಣಾ ಕಾರ್ಯಕ್ರಮ ನಡೆಸಲಾಯಿತು.

ಜೇಸಿ ಸವಿತಾ ರವಿ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಜೇಸಿ ಚರಣ್ ಕುಮಾರ್,ಜೇಸಿ ಆಕಾಶ್, ದಿನದ ಪ್ರಾಜೆಕ್ಟ್ ಡೈರೆಕ್ಟರ್ ಜೇಸಿ ಪ್ರಶಾಂತ್ ಬಿದರಹಳ್ಳಿ ಹಾಗೂ ಸಪ್ತಾಹದ ನಿರ್ದೇಶಕರು ಜೆಸಿ ದೀಪಿಕಾ ಪ್ರಸಾದ್ ಪಾಲ್ಗೊಂಡಿದ್ದರು.

ಅದೇ ದಿನ ಬೆಳಗ್ಗೆ 9:30ಗೆ ಸ್ಥಳೀಯ ವರ್ತಕರಿಂದ ಖರೀದಿಸಿ ತಳಿಯ ಆರ್ಥಿಕತೆಯನ್ನು ಬಲಗೊಳಿಸುವುದರ ಜಾಥವನ್ನು ಜೇಸಿ ಸವಿತಾ ರವಿಯವರ ಅಧ್ಯಕ್ಷತೆಯಲ್ಲಿ ನಡೆಸಿದ್ದು ಇದರಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಜೇಸಿ ಕೆ.ಎಲ್.ಎಸ್.ತೇಜಸ್ವಿ,ಲೇಡಿ ಜೇಸಿ ಪೂರ್ವ ಅಧ್ಯಕ್ಷರಾದ ಜೇಸಿ ಸುಚಿತ್ರ ಪ್ರಸನ್ನ ,ಲೇಡಿ ಜೇಸಿ ಕೋ ಆರ್ಡಿನೇಟರ್ ಜೇಸಿ ಕವಿತಾ ಸಂತೋಷ್ ,ಲೇಡಿ ಜೇಸಿ ಕಾರ್ಯದರ್ಶಿ ಜೇಸಿ ರೇಖಾ ನಾಗರಾಜ್,ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ವಿದ್ಯಾ ರಾಜು,ಸಪ್ತಾಹದ ನಿರ್ದೇಶಕರು ಜೇಸಿ ದೀಪಿಕಾ ಪ್ರಸಾದ್ ,ದಿನದ ನಿರ್ದೇಶಕರು ಜೇಸಿ ಪ್ರಶಾಂತ್ ಬಿದರಹಳ್ಳಿ, ಕಾರ್ಯದರ್ಶಿ ಜೇಸಿ ಪ್ರದೀಪ್ ಕೆ.ಕೆ ಮತ್ತು ಸದಸ್ಯರುಗಳಾದ ಜೇಸಿ ರಮ್ಯಾ ಸಂದೇಶ್,ಜೇಸಿ ನಿಶ್ಚಿತ ಯತೀಶ್,ಜೇಸಿ ಶೋಭಾ ,ಜೇಸಿ ದೀಕ್ಷಿತ್ ಕಣಚೂರು , ಜೇಸಿ ಸುಪ್ರೀತ್ ಕಾರಬೈಲ್,ಜೇಸಿ ರವಿ ಕೆ ಎನ್, ಜೇಸಿ ಚರಣ್ ಕುಮಾರ್ ಭಾಗವಹಿಸಿದ್ದರು.

ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು,ಸವಿತಾ ರವಿಯವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿ ಕೆ.ಎಲ್.ಎಸ್.ತೇಜಸ್ವಿ ಅಧ್ಯಕ್ಷರು ರೋಟರಿ ಸಂಸ್ಥೆ ಮೂಡಿಗೆರೆ,ಶ್ರೀಮತಿ ಕಲಾವತಿ ರಾಜಣ್ಣ ಅಧ್ಯಕ್ಷರು ಕಾಫಿ ನಾಡು ಮಹಿಳಾ ಒಕ್ಕಲಿಗರ ಸಂಘ ಮೂಡಿಗೆರೆ,ಶ್ರೀ ಕೆ.ಟಿ.ದೇವಪ್ಪ ಅಧ್ಯಕ್ಷರು ಲಯನ್ಸ್ ಸಂಸ್ಥೆ ಮೂಡಿಗೆರೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಾಗೂ ಸಭೆಯಲ್ಲಿ ಪೂರ್ವಾಧ್ಯಕ್ಷರು ಹಾಗೂ ಜೇಸಿ ರೇಟ್ ಪೂರ್ವ ಅಧ್ಯಕ್ಷರು ಹಾಗೂ ಜೆಸಿ ಸದಸ್ಯರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಗಿದ್ದು ಇದನ್ನು ಜೆಸಿ ಪೂರ್ವಾಧ್ಯಕ್ಷರಾದ ಪ್ರಸನ್ನ ಗೌಡಹಳ್ಳಿ ಅವರು ನಡೆಸಿಕೊಟ್ಟರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *