“ಮಾರ್ಗಸೂಚಿ ನಾಮಫಲಕ ಅನಾವರಣ ಮತ್ತು ವಿದ್ಯುತ್ ಚಾಲಿತ ವಾಹನಗಳ ಅರಿವು.”
1 min read
ದಿನಾಂಕ 11/09/2023ರ ಸೋಮವಾರದಂದು ಸಂಸ್ಕೃತಿ ಜೆ.ಸಿ. ಸಪ್ತಾಹದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ಮೂಡಿಗೆರೆ ಜೆಸಿ ಭವನದಲ್ಲಿ ಮಾರ್ಗಸೂಚಿ ನಾಮಫಲಕ ಅನಾವರಣ ಮತ್ತು ವಿದ್ಯುತ್ ಚಾಲಿತ ವಾಹನಗಳ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು .

ಇದರ ಅಧ್ಯಕ್ಷತೆಯನ್ನು ಸವಿತಾ ರವಿ ಅವರು ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಸುಧೀರ್ ಪಟ್ಟಣ ಪಂಚಾಯಿತಿ ಸದಸ್ಯರು ಮೂಡಿಗೆರೆ, ಶ್ರೀ ಪ್ರವೀಣ್ ಪೂಜಾರಿ ತಾಲ್ಲೂಕು ಮಾಸ್ಟರ್ ಶೌರ್ಯ ವಿಪತ್ತು ನಿರ್ವಹಣಾ ತಂಡ ಮೂಡಿಗೆರೆ ,ಜೆಸಿ ಶೇಖರ್ ಬೆಳ್ಳುಳ್ಳಿ ಕಾರ್ಯಕ್ರಮ ವಿಭಾಗದ ಸಲಹೆಗಾರರು ವಲಯ 14, ಶ್ರೀ ಅಬ್ದುಲ್ ರಶೀದ್ ಮಾಲೀಕರು ಗ್ರೀನ್ ಸ್ಕೋರ್ ಹ್ಯಾಂಡ್ ಪೋಸ್ಟ್ ಮೂಡಿಗೆರೆ ,ಜೆಸಿ ವಿದ್ಯಾ ರಾಜು ನಿಕಟ ಪೂರ್ವ ಅಧ್ಯಕ್ಷರು, ಜೆಸಿ ಕವಿತಾ ಸಂತೋಷ ಲೇಡಿ ಅಧ್ಯಕ್ಷರು ,ಜೆಸಿ ರೇಖಾ ನಾಗರಾಜ ಲೇಡಿ ಜೆಸಿ ಕಾರ್ಯದರ್ಶಿ, ಜೆಸಿ ಪ್ರದೀಪ್ ಕುನ್ನಳ್ಳಿ ಜೆಸಿ ಕಾರ್ಯದರ್ಶಿ, ಜೆಸಿ ದೀಪಿಕಾ ಪ್ರಸಾದ್ ಸಪ್ತಾಹದ ನಿರ್ದೇಶಕರು ಹಾಗೂ ದಿನದ ನಿರ್ದೇಶಕರು ಜೆಸಿ ಚರಣ್ ಕುಮಾರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .ಸಭೆಯಲ್ಲಿ ಜೆಸಿ ಪೂರ್ವಾಧ್ಯಕ್ಷರು ಹಾಗೂ ಜೆಸಿ ಸದಸ್ಯರು ಪಾಲ್ಗೊಂಡಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




