“ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ,ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಪ್ರವಚನ ಮಾಲಿಕೆ ಕಾರ್ಯಕ್ರಮ.”
1 min read
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ,ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಪ್ರವಚನ ಮಾಲಿಕೆಯು ದಿನಾಂಕ 05/09/2023ರ ಮಂಗಳವಾರದಂದು ಯುರೇಕಾ ಅಕಾಡೆಮಿಯ ಸ್ಥಾಪಕರಾದ ದೀಪಕ್ ದೊಡ್ಡಯ್ಯರವರ ನಿವಾಸದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ನೇರವೇರಿಸಿದರು.
ಪ್ರಾರ್ಥನೆಯನ್ನು ಸುಚಿತ್ರಪ್ರಸನ್ನ ಅವರು ಹಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಜಿಲ್ಲೆ ಕಂಡು ಅತ್ಯುತ್ತಮ ವಾಗ್ಮಿ, ಸಾಹಿತಿ ಚಟ್ನಳ್ಳಿ ಮಹೆಶರವರಿಂದ ಮುತ್ತಿನಂತ ಮಾತು ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೆ.ಸಿ.ರತನ್,ಜಯಂತ್ ಬಿದರಹಳ್ಳಿ,ಹಳೇಕೋಟೆ ವಿನಯ್,ಪ್ರಭುಲಿಂಗ ಶಾಸ್ತ್ರಿ,ದೀಪಕ್ ದೊಡ್ಡಯ್ಯ,ಸಂದೀಪ್ ಕೊಳೂರು,ಆಶಾಮೊಹನ್,ಅವಿನ್ ಟಿವಿಯ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿಗಣೇಶ್ ಹಾಗೂ ಹಿತೈಷಿಗಳು,ಸ್ನೇಹಿತರು,ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




