“ಅಕ್ರಮ ಭೂ ಮಂಜೂರಾತಿ ಹಗರಣ -ಗಂಭೀರ ಪರಿಗಣನೆ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ -ಆಸ್ತಿ ಮುಟ್ಟುಗೋಲು.”
1 min read
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಡೂರು ತಾಲೂಕುಗಳಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣವನ್ನು ಯಾವುದೇ ಒತ್ತಡಗಳಿಗೆ ಮಣಿಯದೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಈ ಎರಡೂ ತಾಲೂಕುಗಳಲ್ಲಿ ನೀತಿ ನಿಯಮಗಳನ್ನು ಮೀರಿ ಕಾನೂನುಬಾಹಿರವಾಗಿ ಸುಮಾರು 6,000ಕ್ಕೂ ಅಧಿಕ ಎಕರೆ ಭೂಮಿ ಮಂಜೂರು ಆಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.ಈ ಮಾಹಿತಿ ನೀಡಿದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಅಂಕಿ ಅಂಶ ದಾಖಲೆಗಳನ್ನು ಪರಿಗಣಿಸಿ ತನಿಖೆ ನಡೆಸುತ್ತಿದ್ದು, ಯಾರೂ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.ಮೂಡಿಗೆರೆ ತಾಲ್ಲೂಕಿನಲ್ಲಿ 2000 ಪ್ರಕರಣ ಬೆಳಕಿಗೆ ಬಂದಿದ್ದು, ಅದರಲ್ಲಿ 1320 ಪ್ರಕರಣಗಳಲ್ಲಿ 3700 ಎಕರೆ ಕಾನೂನು ಬಾಹಿರವಾಗಿ ಭೂ ಮಂಜೂರು ಮಾಡಲಾಗಿದೆ ಎಂದರು.ಎರಡನೇ ಹಂತದಲ್ಲಿ ಅನುಮಾನ ಎಂದು ಪರಿಗಣಿಸಿರುವ 640 ಪ್ರಕರಣಗಳಲ್ಲಿ 1,500 ಎಕರೆ ಭೂಮಿ ಮಂಜೂರು ಆಗಿದೆ. ಇದರಲ್ಲಿ ಸ್ವಲ್ಪ ಏರಿಳಿತಗಳು ಆಗುವ ಸಾಧ್ಯತೆ ಇದೆ ಎಂದು ಹೇಳಿದರು.ಕಡೂರು ತಾಲ್ಲೂಕಿನಲ್ಲಿ 2240 ಪ್ರಕರಣ ಬೆಳಕಿಗೆ ಬಂದಿದ್ದು1030 ಪ್ರಕರಣಗಳಲ್ಲಿ 2500 ಎಕರೆ ಭೂಮಿ ಅಕ್ರಮವಾಗಿ ಮಂಜೂರು ಆಗಿದ್ದು ಇದರಲ್ಲಿ ಅರಣ್ಯ ಭೂಮಿಯು ಸೇರಿದೆ ಎಂದು ತಿಳಿಸಿದ್ದಾರೆ. ಎರಡನೇ ಹಂತದಲ್ಲಿ 961 ಅನುಮಾನಾಸ್ಪದ ಪ್ರಕರಣ ಎಂದು ಗುರುತಿಸಲಾಗಿದೆ ಎಂದಿದ್ದಾರೆ.ಅರ್ಜಿ ಸಲ್ಲಿಸದೆ, ಸಮಿತಿ ಒಪ್ಪಿಗೆ ಪಡೆಯದೆ ಸರ್ಕಾರಿ ಗೋಮಾಳವು ಸೇರಿದಂತೆ ಭೂಮಿಯನ್ನು ಮಂಜೂರು ಮಾಡಿದ್ದು, ಕೆಲವು ಪ್ರಕರಣಗಳಲ್ಲಿ ಕಡತಗಳೆ ಇಲ್ಲ ಎಂದು ಹೇಳಿದರು.ತನಿಖೆಯ ಪ್ರಗತಿಯನ್ನು ಪ್ರತಿದಿನ ತಾವೇ ಖುದ್ದಾಗಿ ಪರಿಶೀಲಿಸುತ್ತಿದ್ದು, ಕಂದಾಯ ಆಯುಕ್ತರು ಭೇಟಿ ನೀಡಿ ವರದಿಯನ್ನು ಪಡೆದಿದ್ದು ಇನ್ನು 20 ದಿನದಲ್ಲಿ ಸ್ಪಷ್ಟವಾದ ವರದಿ ಸಲ್ಲಿಕೆ ಆಗುವ ಸಾಧ್ಯತೆಗಳು ಇದೆ ಎಂದರು.
ಬಡವರಿಗೆ ತೊಂದರೆ ಇಲ್ಲ:
ಭೂ ಒತ್ತುವರಿಗೆ ಸಂಬಂಧಿಸಿದಂತೆ ಅನುಮಾನಾಸ್ಪದ ಪ್ರಕರಣಗಳಲ್ಲಿ ಬಡವರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




