“ನಿರ್ಗತಿಕ ವೃದ್ಧೆ ವೃದ್ಧಾಶ್ರಮಕ್ಕೆ.”
1 min read
ದಿನಾಂಕ 11/08/2023ರ ಶುಕ್ರವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಣಕಲ್ ಹೋಬಳಿಯ,ಫಲ್ಗುಣಿ ಗ್ರಾಮದ ನಿರ್ಗತಿಕ ವೃದ್ಧೆಯೊಬ್ಬರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.


ಸಬ್ಬೇನಹಳ್ಳಿಯ ಪಿ.ಕೆ.ಹಸನಬ್ಬ ಅವರು ತಮ್ಮ ಮನೆಯಲ್ಲಿಟ್ಟುಕೊಂಡು ತಾಯಿ ಮತ್ತು ಮಗಳನ್ನು ಸುಮಾರು 4 ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು.ಕೆಲವು ತಿಂಗಳ ಹಿಂದೆ ಈ ಕುರಿತು ನಮ್ಮ ಅವಿನ್ ಟಿವಿಯು ವರದಿ ಕೂಡ ಮಾಡಿತ್ತು.ಸುಮಾರು 80 ವರ್ಷದ ವೃದ್ಧೆ ಹಾಗೂ ಸುಮಾರು 65 ವರ್ಷ ಪ್ರಾಯದ ಮಗಳು ಜೊತೆಯಲ್ಲಿ ವಾಸಿಸುತ್ತಿದ್ದರು.ಇವರು ಮೂಲತಃ ಫಲ್ಗುಣಿಯವರಾಗಿದ್ದು 65 ವರ್ಷ ಪ್ರಾಯದ ಮಗಳ ಮಕ್ಕಳು ಇವರನ್ನು ನೋಡಿಕೊಳ್ಳುತ್ತಿರಲಿಲ್ಲ.ಇತ್ತೀಚೆಗೆ ವೃದ್ಧೆಯ ಮಗಳು ಮೃತಪಟ್ಟಿದ್ದು ಆ ವೃದ್ಧೆಯು ಒಂಟಿಯಾಗಿದ್ದರು.ಇವರು ವಾಸವಾಗಿದ್ದ ಮನೆಯು ಕುಸಿಯುವ ಹಂತದಲ್ಲಿದ್ದು ಮನೆಯ ಮಾಲೀಕರಾದ ಹಸನಬ್ಬ ಅವರು ಈ ವೃದ್ಧೆಯು ಇಲ್ಲಿರುವುದು ಸೂಕ್ತವಲ್ಲ ಎಂದು ಪರಿಗಣಿಸಿ ಫಲ್ಗುಣಿ ಗ್ರಾಮ ಪಂಚಾಯಿತಿ ಮತ್ತು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋನು ಮತ್ತು ಉಪಾಧ್ಯಕ್ಷರು ಹಾಗೂ ಅಂಬುಲೆನ್ಸ್ ಚಾಲಕರಾದ ಆರೀಫ್ ಬಣಕಲ್ ಅವರ ಮುಖಾಂತರ ಸಾಮಾಜಿಕ ನ್ಯಾಯ ಸಚಿವಾಲಯ ಭಾರತ ಸರ್ಕಾರದ ಪ್ರಾಯೋಜಿತದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ,ಇಂದಾವರದ ಅನ್ನಪೂರ್ಣ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.


ಈ ಸಂದರ್ಭದಲ್ಲಿ ಫಲ್ಗುಣಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.