“ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಚೆಸ್ ಪಂದ್ಯಾವಳಿ.”
1 min read
ಚಿಕ್ಕಮಗಳೂರು ಜಿಲ್ಲೆಯ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡಿಗೆರೆ ಮತ್ತು ಎಲೈಟ್ ಮೈಂಡ್ಸ್ ಇಂಟರ್ನ್ಯಾಷನಲ್ ಸ್ಕೂಲ್, ಚಿನ್ನಿಗ-ಜನ್ನಾಪುರ ಇವರ ವತಿಯಿಂದ ಮೂಡಿಗೆರೆ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಚೆಸ್ ಪಂದ್ಯಾವಳಿಯನ್ನು ಆಯೋಜಿಸಿದ್ದು ಈ ಪಂದ್ಯಾವಳಿಯ ಉದ್ಘಾಟನೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಬೃಂದಾ ಅಶೋಕ್ ರವರು ಚೆಸ್ ಪಾನ್ ಚಲಾಯಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ವೇದಿಕೆಯಲ್ಲಿ ಆಸೀನರಾಗಿದ್ದ, ಚಿನ್ನಿಗ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಸುನಿಲ್ ಕಾರ್ಯಕ್ರಮಕ್ಕೆ ಶುಭ ಕೋರಿದರು, ಶ್ರೀಮತಿ ವೇಣಿ, ಅಧ್ಯಕ್ಷರು ತಾಲ್ಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮೂಡಿಗೆರೆ ಇವರು ಸ್ಪರ್ಧಾಳುಗಳನ್ನ ಕುರಿತು ಚದುರಂಗ ಆಟದ ಬಗ್ಗೆ ಮಾಹಿತಿಯನ್ನ ನೀಡುವ ಮೂಲಕ ಆಗಮಿಸಿದ ಮತ್ತು ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನ ಕೋರಿದರು.

ನಂತರ ಡಾಕ್ಟರ್ ಫೈರೋಜ್ ಅಹಮದ್ ರವರು ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ತಂಡದ ಮೇಲ್ವಿಚಾರಕರಿಗೆ ಮತ್ತು ಮಕ್ಕಳಿಗೆ ಶುಭಾಶಯಗಳನ್ನ ಇಲಾಖೆ ವತಿಯಿಂದ ಕೋರಿದರು, ಶ್ರೀಯುತ ಗಿರೀಶ್ ರಾಜ್ಯ ಚೆಸ್ ಅಶೋಷಿಯೇಷನ್ ಸಂಘದ ಕಾರ್ಯದರ್ಶಿಗಳು ಮಕ್ಕಳಿಗೆ ಮತ್ತು ತೀರ್ಪುಗಾರರಿಗೆ ಕಾರ್ಯಾಗಾರವನ್ನ ನಡೆಸಿ ಮಕ್ಕಳಿಗೆ ಚೆಸ್ ನಲ್ಲಿ ಇರುವ ಗೊಂದಲವನ್ನ ಪರಿಹರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಯನ್ನ ಹಾಡಿದರೆ ಶ್ರೀಮತಿ ಮಧುರ ಸ್ವಾಗತಿಸಿದರು, ಶ್ರೀಮತಿ ಫಿಲೋಮಿನಾ ಪಿಂಟೋ ಸರ್ವರನ್ನು ವಂದಿಸಿದರೆ, ವಿಜೇಂದ್ರ ರವರು ಕಾರ್ಯಕ್ರಮವನ್ನ ನಿರೂಪಿಸಿದರು,
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಜಮೀಲಾ,
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಯುತ ನಾಗದೇವ್,
ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಅಕ್ಷತಾ ನಾಗದೇವ್, ಹಾಗೂ ಶಿಕ್ಷಕರಾದ ಮಧುರ, ಬಿಂದು, ಅಷ್ಟಮಿ, ಜಯಶ್ರೀ, ಅನುಪ, ನಸ್ರೀನ, ನಿಶಾ, ಗೌತಮಿ, ಪಿಂಟೋ, ವಿಜೇಂದ್ರ, ನಾಗೇಶ್, ವಿಜೇಂದ್ರ ಎಸ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಜಯಪಾಲ್ ಮತ್ತು ಮಕ್ಕಳು ಹಾಜರಿದ್ದರು.
ಬರಹ ಕೃಪೆ.
ಜಯಪಾಲ್ ಬಿ.ಹೊಸಹಳ್ಳಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.