“ಮಾನಸಿಕ ಅಸ್ವಸ್ಥನ ರಕ್ಷಣೆ.”
1 min read
ದಿನಾಂಕ 27/07/2023ರ ಗುರುವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಚಿನ್ನಿಗ ಗ್ರಾಮ ಪಂಚಾಯತ್ ವ್ಯಾಪ್ತಿಯ,ಸುಮಾರು ಜನ್ನಾಪುರದ ತಂಗುದಾಣದಲ್ಲಿ ಸುಮಾರು ದಿನಗಳಿಂದ ಇದ್ದ ಮಾನಸಿಕ ಅಸ್ವಸ್ಥ ಸಿದ್ದಪ್ಪ ಎನ್ನುವ ವ್ಯಕ್ತಿಯನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋನು ಗೌರವಾಧ್ಯಕ್ಷರಾದ ಅಬ್ದುಲ್ ರೆಹಮಾನ್,ಉಮರ್ ಅವರು ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಮನು ಚಂದ್ರಾಪುರ,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸುನಿಲ್ ನಿಡಗೋಡು,ಗ್ರಾಮ ಪಂಚಾಯತ್ ಸದಸ್ಯರಾದ ಪ್ರಹ್ಲಾದ್,ಉದಯ್ ಕುಮಾರ್,ಆದಿ ಗೌಡ,ಚಿನ್ನಿಗ ಗ್ರಾಮ ಪಂಚಾಯತಿ ಇವರೆಲ್ಲರ ಸಹಕಾರದಿಂದ ತುಮಕೂರು ಶಾರದಾಂಬ ಟ್ರಸ್ಟಿಗೆ ಸೇರಿಸಿದರು.

ಈ ಸಂದರ್ಭದಲ್ಲಿ ಆ ಊರಿನ ಸಾರ್ವಜನಿಕರು ಕೈ ಜೋಡಿಸಿದರು.ಇವರ ಉತ್ತಮ ಸಮಾಜ ಸೇವೆ ಹೀಗೆ ಮುಂದುವರಿಯಲಿ ಎಂಬುವುದೇ ನಮ್ಮ ವಾಹಿನಿಯ ಆಶಯ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.