“ಮೈ ಕೆಸರಾದರೆ ಕೈಗೆ ಬಹುಮಾನ.”
1 min read
30/07/2023ರ ಭಾನುವಾರದಂದು ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ,ಕೊಟ್ಟಿಗೆಹಾರದಲ್ಲಿ ನಡೆದ ಅದ್ಭುತ ಕ್ರೀಡೆ.ಪಬ್ಲಿಕ್ ಇಂಪ್ಯಾಕ್ಟ್ ವತಿಯಿಂದ ನಡೆದ ಕೆಸರುಗದ್ದೆ ಕ್ರೀಡಾಕೂಟ.ಮೈನವಿರೆಳಿಸುವ ಸನ್ನಿವೇಶ.ನಯನ ಮನೊಹರ ದೃಶ್ಯ.ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ್ದ ತಂಡಗಳು.ಕೆಸರಿನಲ್ಲಿ ಮಿಂದೆದ್ದ ಕ್ರೀಡಾಭಿಮಾನಿಗಳು. ಸ್ವಿಮೀಂಗ್ ಪೂಲ್ ನಂತಿದ್ದ ಕೆಸರು ಗದ್ದೆಗಳು.ಮಕ್ಕಳು ಮಹಿಳೆಯರು.ಪುರುಷರು.ವಯಸ್ಸಿನ ಅಂತರವಿಲ್ಲದೆ ಕೆಸರಿನ ಸವಿ ಉಂಡ ಸಾರ್ವಜನಿಕರು.


ತರುವೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸತೀಶ್. ಬಿ.ಎಂ.ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಒಳ್ಳೆಯಹುಡುಗ ಖ್ಯಾತಿಯ ಪ್ರಥಮ್.ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು.
ಅಧ್ಯಕ್ಷತೆಯನ್ನು ಪಬ್ಲಿಕ್ ಇಂಪ್ಯಾಕ್ಟ್ ಮುಖ್ಯಸ್ಥರಾದ ಪ್ರಶಾಂತ್ ವಹಿಸಿದ್ದರು.
ತನು ಕೊಟ್ಟಿಗೆಹಾರ,ಅವಿನ್ ಟಿವಿಯ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿ ಗಣೇಶ್,ಅತ್ತಿಗೆರೆ ಸಂತೋಷ್,ಸಂಜಯ್ ಕೊಟ್ಟಿಗೆಹಾರ, ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋನು,ಸಮಾಜ ಸೇವಕರಾದ ಆರೀಫ್ ಬಣಕಲ್,ಆಶಿಕ್ ಬೀಜುವಳ್ಳಿ, ತಾಲ್ಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಹಾಗೂ ಊರಿನ ಎಲ್ಲಾ ಗಣ್ಯರು.ಸಾರ್ವಜನಿಕರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.