लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಮಾಜ ತಿದ್ದುವ ದೊಡ್ಡ ಶಕ್ತಿಯೇ ಪತ್ರಿಕಾರಂಗ: ದೀಪಕ್ ದೊಡ್ಡಯ್ಯ.”

1 min read

ಮಾಧ್ಯಮಗಳಿಲ್ಲದಿದ್ದರೆ ಪ್ರಪಂಚದಲ್ಲಿ ನಡೆಯುವ ನೈಜ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಕಾಲ ಬದಲಾದಂತೆ ಈಗ ಮಾಧ್ಯಮಗಳು ಡಿಜಿಟಲ್ ಮಾಧ್ಯಮವಾಗಿ ಮಾರ್ಪಾಡಾಗಿದ್ದು, ಶೀಘ್ರವಾಗಿ ಮಾಹಿತಿ ತಲುಪಿಸುವ ಕೆಲಸ ಪತ್ರಿಕಾರಂಗ ಮಾಡುತ್ತಿದೆ ಎಂದು ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಹೇಳಿದರು.

ಅವರು ಶುಕ್ರವಾರ ಪಟ್ಟಣದ ತಾ.ಪಂ. ಪಂಡಿತ್ ದಿನ್ ದಯಾಳ್ ಉಪಾಧ್ಯಾಯ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ತಿದ್ದುವ ದೊಡ್ಡ ಶಕ್ತಿವೊಂದಿದ್ದರೆ ಅದು ಪತ್ರಿಕಾರಂಗ. ಪತ್ರಕರ್ತರು ನಿರ್ಭಯವಾಗಿ ಯಾವುದೇ ಮುಲಾಜಿಲ್ಲದೇ ವಸ್ತುನಿಷ್ಟ ಸುದ್ದಿಗಳನ್ನು ವರದಿ ಮಾಡಿದರೆ ಸಮಾಜ ತಾನಾಗಿಯೇ ಪರಿವರ್ತನೆ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಚಿಕ್ಕಮಗಳೂರು ದರ್ಪಣ ಪತ್ರಿಕೆಯ ಸಂಪಾದಕರಾದ ಪ್ರಸನ್ನ ಗೌಡ ಹಳ್ಳಿ ಮಾತನಾಡಿದರು.

ತಾ.ಪಂ. ಇಒ ಡಾ.ರಮೇಶ್ ಮಾತನಾಡಿ, ರಸ ಪ್ರಶ್ನೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆ ಓದುವ ಹವ್ಯಾಸ ಮಾಡಬೇಕು. ಪತ್ರಿಕೆಯಲ್ಲಿ ಬರುವ ಸಂಪಾದಕೀಯ ಪುಟವನ್ನು ನಿತ್ಯ ಓದುವ ಹವ್ಯಾಸ ಮಾಡಿಕೊಂಡರೆ ಅದರಿಂದ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಹಾಗೂ ಜ್ಞಾನ ಸಂಪಾಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಶ್ರೀಷಾ ಎಂ.ದೇವಾಂಗ್, ರಶ್ಮೀ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಧನಲಕ್ಷ್ಮಿ ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಸಪ್ರಶ್ನೆ ಸ್ಪರ್ಧೇ ಯಲ್ಲಿ ಪ್ರಥಮ ಸ್ಥಾನ ಪಡೆದ ಬೆಥನಿ ಶಾಲೆಯ ಅಪೇಕ್ಷಾ, ರಚನಾ ಸುಧನ್, ದ್ವಿತೀಯ ಸ್ಥಾನ ಮೂಡಿಗೆರೆ ಎಂಇಎಸ್ ಶಾಲೆಯ ಮಂಜುನಾಥ್, ಅನಿಕೇತನ, ತೃತೀಯ ಸ್ಥಾನ ಕೊಟ್ಟಿಗೆಹಾರ ಪ್ರೌಢಶಾಲೆಯ ಸಾನಿಕ್, ಅಖಿಲೇಶ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆನಂದ್ ಕಣಚೂರು ವಹಿಸಿದ್ದರು. ಪ.ಪಂ.ಸದಸ್ಯರಾದ ಕಮಲಮ್ಮ, ಮನೋಜ್, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಬ್ರಿಜೇಶ್, ಹಳೆಮೂಡಿಗೆರೆ ಗ್ರಾ.ಪಂ. ಸದಸ್ಯ ಚಂದ್ರೇಶ್, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಬಕ್ಕಿ ರವಿ,ವಿನೋದ್ ಕಣಚೂರು, ಪತ್ರಕರ್ತರಾದ ಶಿವಕಾಶಿ,ಪ್ರವೀಣ್‌ಪೂಜಾರಿ, ವಿಜಯ್‌ಕುಮಾರ್,ಪ್ರಸನ್ನಗೌಡಹಳ್ಳಿ,ತನು ಕೊಟ್ಟಿಗೆಹಾರ,ಅಮರ್‌ನಾಥ್,ಮಗ್ಗಲಮಕ್ಕಿ ಗಣೇಶ್ ಹಾಗೂ ಇನ್ನಿತರರು‌ ಹಾಜರಿದ್ದರು.

ಕಾರ್ಯಕ್ರಮಕ್ಕೆ ಬಾರದ ಜನ ಪ್ರತಿನಿಧಿಗಳು.

ಈ ಕಾರ್ಯಕ್ರಮಕ್ಕೆ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು ಆದರೆ ಕಾರ್ಯಕ್ರಮಕ್ಕೆ ಯಾವುದೇ ಜನ ಪ್ರತಿನಿಧಿಗಳು ಬರದೇ ಇರುವುದು ವಿಪರ್ಯಾಸವೇ ಸರಿ.

ಪತ್ರಕರ್ತರು ಯಾವುದೇ ರಾಜಕೀಯ ಮತ್ತು ರಾಜಕೀಯೇತರ ಕಾರ್ಯಕ್ರಮಗಳಿಗೆ ಹಾಜರಾಗದಿದ್ದರೆ ಜನ ಪ್ರತಿನಿಧಿಗಳು ಅವರ ಮೇಲೆ ಗೂಡೆ ಕೂರಿಸುತ್ತಾರೆ ಆದರೆ ಈ ಕಾರ್ಯಕ್ರಮಕ್ಕೆ ಹಾಜರಾಗದೆ ಇದ್ದದ್ದು ನೆರೆದಿದ್ದ ಎಲ್ಲರಲ್ಲೂ ಬೇಸರದ ಭಾವ ಮೂಡಿತ್ತು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *