“ಭರವಸೆ ಶಾಸಕಿಯ ಗಮನಕ್ಕೆ ಬಾರಲಿಲ್ಲವೇ.???”
1 min read
ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಹಳೆ ತಡೆಗೋಡೆಯನ್ನು ಕೆಡವಿ ಹೊಸ ತಡೆಗೋಡೆ ನಿರ್ಮಿಸಲು ಮಣ್ಣು ಕೊರೆದಿದ್ದು, ಮಳೆಯಿಂದ ಪ್ರತಿ ದಿನ ಮಣ್ಣು ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ದುರಸ್ತಿ ಕಾರ್ಯ ಅಗತ್ಯವಿತ್ತೇ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಚೆನ್ನಾಗಿದ್ದ ತಡೆಗೋಡೆಯನ್ನು ತೆರವುಗೊಳಿಸಿ ನೂತನ ತಡೆಗೋಡೆ ನಿರ್ಮಿಸುವ ಅಗತ್ಯ ಇರಲಿಲ್ಲ. ಆದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೂತನ ತಡೆಗೋಡೆ ನಿರ್ಮಿಸುವ ಸಲುವಾಗಿ ಮಳೆಯಲ್ಲಿಯೇ ಹಳೆ ತಡೆಗೋಡೆಯನ್ನು ಜೆಸಿಬಿಯಿಂದ ನೆಲಸಮಗೊಳಿಸಿದ್ದಾರೆ. ಇದರಿಂದ ಮಣ್ಣು ಪ್ರತಿನಿತ್ಯ ಮಳೆಯಿಂದ ಜರಿಯುತ್ತಲೇ ಇದೆ. ಅಲ್ಲದೇ ರಸ್ತೆಯೆಲ್ಲಾ ಕೆಸರುಮಯವಾಗಿದೆ.
ಈ ಹಿಂದೆ ನಮ್ಮ ವಾಹಿನಿಯ ಜೊತೆ ಮಾತನಾಡಿದ ಸಾರ್ವಜನಿಕರು ಮುಂದಿನ ಆಗು ಹೋಗುಗಳ ಬಗ್ಗೆ ಎಚ್ಚರಿಸಿದ್ದರು.ಆದರೂ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಉಡಾಫೆಯಿಂದ ಈ ರೀತಿಯ ಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ
ಈ ಹಿಂದೆ ಇದ್ದ ತಡೆಗೋಡೆ ಬಿರುಕು ಬಿಟ್ಟಿರಲಿಲ್ಲ. ಸುಖಾ ಸುಮ್ಮನೇ ಸರಕಾರದ ಹಣ ಪೋಲು ಮಾಡುವ ಉದ್ದೇಶದಿಂದ ಇಂತಹ ಅವೈಜ್ಞಾನಿಕ ಕೆಲಸ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಹಾಗಾಗಿ ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಿ, ಅವೈಜ್ಞಾನಿಕ ಕೆಲಸ ಮಾಡಲು ಹೊರಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.