लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.


ಪಟ್ಟಣ ಪಂಚಾಯತಿ ಅಧಕ್ಷ ಮತ್ತು ಉಪಾಧ್ಯಕ್ಷರ ಮೊದಲ ಅವಧಿ ಮೇ ನಾಲ್ಕರಂದು ಪೂರ್ಣಗೊಂಡಿದೆ.
ಎರಡನೆ ಅವಧಿಗೆ ಮೀಸಲಾತಿ ಪ್ರಕಟವಾಗಿಲ್ಲ.
ಮುಖ್ಯಾಧಿಕಾರಿ ಮಂಜುನಾಥ್. ಎಸ್.ಡಿ.ಅವರನ್ನು ಬೇಲೂರು ಪುರಸಭೆಗೆ ವರ್ಗಾಯಿಸಲಾಗಿದೆ.ಆಡಳಿತಾಧಿಕಾರಿ ನೇಮಿಸಿದ್ದರೂ ಪ್ರಯೊಜನವಾಗುತ್ತಿಲ್ಲ.ಹೀಗಾಗಿ ಪ.ಪಂನಲ್ಲಿ ಈಗ ಹೇಳುವವರು ಇಲ್ಲ ಕೇಳುವವರಿಲ್ಲ.
ಪಟ್ಟಣ ಪಂಚಾಯತಿ ಹನ್ನೊಂದು ಸದಸ್ಯರ ಪೈಕಿ ಬಿಜೆಪಿ ಆರು.ಕಾಂಗ್ರೆಸ್ ನಾಲ್ಕು.ಜೆಡಿಎಸ್ ಒಂದು ಸದಸ್ಯರಿದ್ದಾರೆ.ಪ.ಪಂಗೆ ಚುನಾವಣೆ ನಡೆದು ನಾಲ್ಕು ವರ್ಷ ಕಳೆದಿದೆ.ಚುನಾವಣೆ ನಡೆದ ಬಳಿಕ ಒಂದೂವರೆ ವರ್ಷದ ನಂತರ ಮೊದಲ ಅವಧಿಯ ಅಧ್ಯಕ್ಷ.ಉಪಾಧ್ಯಕ್ಷ ಚುನಾವಣೆ ನಡೆದಿತ್ತು.
ಈಗ ಅಧ್ಯಕ್ಷ,ಉಪಾಧ್ಯಕ್ಷ ಅವಧಿ ಮುಗಿದು ಒಂದು ತಿಂಗಳು ಕಳೆದಿದೆ.ಬಿಬಿಎಂಪಿ ಚುನಾವಣೆ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಅದು ಇತ್ಯರ್ಥವಾಗುವರೆಗೆ ಪ.ಪಂನ ಎರಡನೇ ಅವಧಿಯ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆ ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಕೈ ಚೆಲ್ಲಿ ತಹಸಿಲ್ದಾರ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.ಆದರೆ ಪ.ಪಂ ಕಚೇರಿಗೆ ಆಡಳಿತಾಧಿಕಾರಿ ಭೇಟಿ ನೀಡುತ್ತಿಲ್ಲ..ಬೇರೊಬ್ಬ ಮುಖ್ಯಾಧಿಕಾರಿಯನ್ನು ನೇಮಿಸಲು ಸರ್ಕಾರ ಮುಂದಾಗಿಲ್ಲ.ಪೌರ ಕಾರ್ಮಿಕರು ನೀರು ಗಂಟಿಗಳ ಕೆಲಸ ಹೊರತು ಪಡಿಸಿ ಉಳಿದ ಯಾವುದೆ ಕೆಲಸವಾಗುತ್ತಿಲ್ಲ.ಹನ್ನೊಂದು ಸದಸ್ಯರು ಅಭಿವೃದ್ಧಿ ಕಾರ್ಯ ಕೈಕೊಳ್ಳಲು ಸಾಧ್ಯವಾಗದೆ ಮತದರಾರರಿಗೆ ಮುಖ ತೊರಿಸಲಾಗದೆ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ನೆನೆಗುದಿಗೆ ಬಿದ್ದ ಕೆಲಸಗಳು.


ಆಡಳಿತ ನಡೆಸುವವರು ಇಲ್ಲದಿರುವುದರಿಂದ ಯಾವುದೆ ಕಾಮಗಾರಿಯು ನಡೆಯುತ್ತಿಲ್ಲ.ಮಳೆಗಾಲ ಶುರುವಾಗಿ ರಸ್ತೆಗಳು ಕೊಚ್ಚಿ ಹೋಗಿ ಗುಂಡಿಗಳು ಅಲ್ಲಲ್ಲಿ ಬಿದ್ದಿವೆ.ಪಟ್ಟಣದ ಹೈಮಾಸ್ಕ್ ಲೈಟ್ ಸೇರಿ ಎಲ್ಲಿಯೂ ಸರಿಯಾದ ಬಲ್ಬುಗಳಿಲ್ಲ.
ಬಾಕ್ಸ್ ಚರಂಡಿಗಳು ಬಾಯಿ ಬಿಟ್ಟು ಕೊಂಡಿವೆ
ಪೌರ ಕಾರ್ಮಿಕರು ಮತ್ತು ನೀರು ಗಂಟಿ ಹಾಗೂ ಕಚೇರಿಯ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ.ನಗರೋತ್ಥಾನ ಯೋಜನೆಯಲ್ಲಿ ಐದು ಕೋಟಿ ಬಿಡುಗಡೆಯಾಗಿ ಅರು ತಿಂಗಳು ಕಳೆದಿದೆ.ಅದರಲ್ಲಿ ಐವತ್ತು ಲಕ್ಷ ಎಂ ಜಿ ರಸ್ತೆ ಅಗಲಿಕರಣಕ್ಕೆ ಉಳಿದ ನಾಲ್ಕುವರೆ ಕೋಟಿ ವಿವಿಧ ಬಡಾವಣೆಯ ರಸ್ತೆ ಡಾಂಬರೀಕರಣ.ಕಾಂಕ್ರಿಟೀಕರಣಕ್ಕೆಂದು ಕ್ರೀಯಾ ಯೋಜನೆ ತಯಾರಿಸಲಾಗಿದೆ.ಕೆ.ಎಂ.ರಸ್ತೆಯ ಅಂಚೆ ಕಚೇರಿ ಎದುರು ಹಾಗೂ ಎಸ್ ಬಿ ಐ ಪಕ್ಕದ ಹಳೆಯ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.ಅಲ್ಲಿ ಹೊಸದಾಗಿ ಮೂವತ್ತು ಮಳಿಗೆ ನಿರ್ಮಿಸಲು ಹದಿನೈದು ಕೋಟಿ ರೂ. ಅನುದಾನವಿದೆ.ಅದರೆ ಕೆಲಸ ನೆನೆಗುದಿಗೆ ಬಿದ್ದಿದೆ.
ಬಿಬಿಎಂಪಿ ಚುನಾವಣೆಗೆ ಸಂಬಂಧಪಟ್ಟ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಅಧ್ಯಕ್ಷ. ಉಪಾಧ್ಯಕ್ಷ ರ ಚುನಾವಣೆ ನಿಗದಿಯಾಗಿಲ್ಲ.ಸದಸ್ಯರು ಇರುವಾಗ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸರಿಯಲ್ಲ.ಸರ್ಕಾರ ಮೀಸಲಾತಿ ಪ್ರಕಟಿಸಿ ಎರಡನೆ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ರ ಚುನಾವಣೆ ನಡೆಸಬೇಕು. ಸದಸ್ಯರು ಅಭಿವೃದ್ಧಿ ಕೆಲಸ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಪಪಂ ಮಾಜಿ ಅಧ್ಯಕ್ಷರಾದ ಪಿ.ಜಿ.ಅನುಕುಮಾರ್ ತಿಳಿಸಿದ್ದಾರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *