“ವೈದ್ಯ ದಿನಾಚರಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಜೆಸಿ ಭವನದಲ್ಲಿ ದಿನಾಂಕ 01/07/2023ರ ಶನಿವಾರದಂದು ಬೆಳಗ್ಗೆ 11:00 ಗಂಟೆಗೆ ಜೆಸಿಐ ಮೂಡಿಗೆರೆ ವತಿಯಿಂದ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಸದಾ ಜನರಿಗೆ ಸೇವೆ ನೀಡುತ್ತಿರುವ ವೈದ್ಯರಿಗೆ ಈ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸುವ ನಮ್ಮ ಈ ಪ್ರಯತ್ನವು ಸೇವೆ ನೀಡಲು ವೈದ್ಯರೆಲ್ಲರಿಗೂ ಇನ್ನಷ್ಟು ಸ್ಫೂರ್ತಿಯನ್ನು ನೀಡಲೆಂದು ಆಶಿಸಲಾಯಿತು.
ಕಾರ್ಯಕ್ರಮದಲ್ಲಿ 20 ವೈದ್ಯರನ್ನು ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಜೆಸಿ ಸವಿತರವಿ ವಹಿಸಿದ್ದರು.
ಉದ್ಘಾಟಕರಾಗಿ ಜೆಸಿ ಹಳೇಕೋಟೆ ರಮೇಶ್ ಅವರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೆಸಿ.ಡಾ.ರಾಮಚರಣ ಅಡ್ಯಂತಾಯ ಮತ್ತು MGM ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಶಾಂಭವಿ.ಸಿ.ಎಸ್. ಭಾಗವಹಿಸಿದ್ದರು.


ಜೆಸಿ ಕಾರ್ಯದರ್ಶಿ ಜೆಸಿ ಪ್ರದೀಪ್ ಕೆ ಕೆ, ಜೆಸಿ ಕವಿತಾ ಸಂತೋಷ್,ಜೆಸಿ ರೇಖಾ ನಾಗರಾಜ್, ಜೆಸಿ ಆಕಾಶ್ ಜೆಸಿ ಪೂರ್ವಾಧ್ಯಕ್ಷರುಗಳು, ಮಹಿಳಾ ಜೆಸಿ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು,ಸದಸ್ಯರು ಪಾಲ್ಗೊಂಡಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









