“ಬಕ್ರೀದ್ ಹಬ್ಬ ಎಲ್ಲರಿಗೂ ಒಳಿತನ್ನು ಮಾಡಲಿ : ರಫೀಕ್ ಅಹ್ಸನಿ.”
1 min read
ಬೆಳ್ತಂಗಡಿ ತಾಲ್ಲೂಕಿನ ಬೆದ್ರಬೆಟ್ಟು ಅರ್ರಿಫಾಯಿಯ್ಯ ಮಸೀದಿಯಲ್ಲಿ ಬಕ್ರೀದ್ ಆಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿಯ (ಖತೀಬ್) ಧರ್ಮಗುರುಗಳಾದ ಬಹು ರಫೀಕ್ ಅಹ್ಸನಿಯವರು ಸ್ನೇಹ, ಶಾಂತಿ, ಸಮಾಧಾನ,ತ್ಯಾಗ,ಬಲಿದಾನ,ಪರಸ್ಪರ ಸಹಾಯದೊಂದಿಗೆ ಮಾನವ ಸೌಹಾರ್ದ ಹಾಗೂ ವಿಶ್ವ ಭ್ರಾತೃತ್ವದ ಮಹೋನ್ನತ
ಸಂದೇಶಗಳನ್ನು ಸಾರುತ್ತಾ ಈದುಲ್ ಅಳ್ಹಾ (ಬಕ್ರಿದ್ ಹಬ್ಬ) ಅಖಂಡ ಜಗತ್ತಿನ ಕೋಟ್ಯಂತರ ಜನರಿಗೆ ಒಳಿತನ್ನು ನೀಡಲಿ ಹಾಗೂ ದೇಶದಾದ್ಯಂತ ಸಂಕಷ್ಟ , ನೋವು ಅನುಭವಿಸುತ್ತಿರುವ ಎಲ್ಲಾ ಸಮಾಜದ ದುಃಖಿತರಿಗೆ ಅಲ್ಲಾಹನು ಶಾಂತಿ ಸಮಾಧಾನವನ್ನು ನೀಡಲಿ ಎಂದು ಬಕ್ರೀದ್ ಭಾಷಣದಲ್ಲಿ ಪ್ರಾರ್ಥಿಸಿ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ನಂತರ ಸಾಮೂಹಿಕ ನಮಾಝ್ ನಿರ್ವಹಿಸಿ ಖುತುಬ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಮಾತ್ ಆಡಳಿತ ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳು ಜಮಾತ್ ಸಮಸ್ತ ಮುಸ್ಲಿಂ ಬಾಂಧವರು ಮಕ್ಕಳು ಸೇರಿದ್ದರು.
ಖುತುಬದ ಬಳಿಕ ದಫನ ಭೂಮಿಗೆ ತೆರಳಿ ಆಗಲಿದ ಕುಟುಂಬದ ಸದಸ್ಯರ ಮಗ್ಫಿರತಿಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು,ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯಗಳನ್ನು ಕೋರಿದರು.
ಬರಹ ಕೃಪೆ.
ಶಾಹಿನ್.ಉಜಿರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











