“ಸಹನಾ ಶ್ರೀ ಸಹಕಾರಿ ಸೊಸೈಟಿಗೆ ಕ್ರೈಸ್ತ ಧರ್ಮ ಗುರುಗಳ ಭೇಟಿ.”
1 min read
ಉಜಿರೆಯ ಕಾಶಿಬೆಟ್ಟಿನ ರಾಜ ರಾಜೇಶ್ವರಿ ಸಂಕೀರ್ಣ ದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗುವ ಸಹನಶ್ರೀ ಸೌಹಾರ್ದ ಸಹಕಾರಿ ಸೊಸೈಟಿಯ ನೂತನ ಕಛೇರಿಯ ಕಟ್ಟಡವನ್ನು ಬಂಗಾಡಿ ಮರಿಯಾಂಬಿಕ ಚರ್ಚಿನ ಧರ್ಮಗುರುಗಳಾದ ವಂದನೀಯ ಸಿ.ಕೆ.ಫಾ.ಸೇಬಾಸ್ಟಿಯನ್ ಅವರ ನೇತೃತ್ವದಲ್ಲಿ ಕೆ.ಎಸ್.ಎಂ.ಸಿ.ಎ ನಿರ್ದೇಶಕರು ಹಾಗೂನೆಲ್ಯಾಡಿ ಅಲ್ಫೋನ್ಸ ಪಿಲ್ಗ್ರಿಮ್ ಚರ್ಚ್ ನ ವಂದನೀಯ ಫಾ.ಶಾಜಿ ಮ್ಯಾತ್ಯು, ದೇವಗಿರಿ ಚರ್ಚ್ ನ ವಂದನೀಯ ಫಾ. ಸಿರಿಲ್ ಪ್ರಾರ್ಥನಾ ವಿಧಿಗಳನ್ನು ದಿನಾಂಕ ಜೂನ್ 28 ನೇ ಬುಧವಾರದಂದು ನೆರವೇರಿಸಿ ಆಶೀರ್ವದಿಸಿದರು.
ಸೊಸೈಟಿಯ ಅಧ್ಯಕ್ಷರು ನೈರುತ್ಯ ರೈಲ್ವೆ ಸಮಿತಿಯ ಸದಸ್ಯರಾದ ರಾಜೇಶ್ ಪುದುಶೇರಿ, ಅಭಿಲಾಶ್ ವಾಳೂಕಾರನ್, ಸಣ್ಣಿ ಮುಟ್ಟತ್, ಜೋಯ್, ಆಗಸ್ತಿ, ಸಜಿ ಓ ಎಂ ಮೊದಲಾದವರು ಉಪಸ್ಥಿತರಿದ್ದರು.
ಬರಹ ಕೃಪೆ.
ಶಾಹಿನ್.ಉಜಿರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











