ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು. ಶಿಕ್ಷಣ ಸಂಸ್ಥೆಯ ಜವಾಬ್ದಾರಿ
1 min read
ಶ್ರೀ ವಿದ್ಯಾ ಭಾರತಿ ವಿದ್ಯಾ ಸಂಸ್ಥೆ( ರಿ ) ಬಣಕಲ್. ನಲ್ಲಿ ಪ್ರತಿವರ್ಷದಂತೆ ಇಂದು ಪೂರ್ವ ಪ್ರಾಥಮಿಕ ಮತ್ತು ಒಂದನೇ ತರಗತಿ ಮಕ್ಕಳಿಗೆ ಶಾಸ್ತ್ರೋಕ್ತ ಅಕ್ಷರಭ್ಯಾಸ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಮಾತೃ ಪಿತೃ – ಗುರುವಂದನಾ ಕಾರ್ಯಕ್ರಮ.ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಶಿವರಾಮ ಶೆಟ್ಟಿ. ನಮ್ಮ ವಿದ್ಯಾ ಸಂಸ್ಥೆಯಲ್ಲಿ ಪ್ರತಿ ವರ್ಷವೂ ಹೊಸದಾಗಿ ಎಲ್.ಕೆ.ಜಿ. ಯು.ಕೆ.ಜಿ ಮತ್ತು ಒಂದನೇ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಭ್ಯಾಸ ಕಾರ್ಯಕ್ರಮ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಮಾತೃ ಪಿತೃ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ನಮ್ಮ ವಿದ್ಯಾ ಸಂಸ್ಥೆಯ ಎಲ್ಲಾ ಪೋಷಕರಿಗೂ ಪುಣ್ಯಕ್ಷೇತ್ರ ಗಳಿಗೆ ತೆರಳಿ ತಮ್ಮ ಮಕ್ಕಳಿಗೆ ಶಾಸ್ತ್ರೋಕ್ತ ಅಕ್ಷರಭ್ಯಾಸ ಮಾಡಿಸಲು ಸಾಧ್ಯವಾಗದೇ ಇರಬಹುದು ಈ ನಿಟ್ಟಿನಲ್ಲಿ ಅಂತಹ ಪೋಷಕರಿಗೆ ನಿರಾಸೆಯಾಗಬಾರದು. ಮತ್ತು ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಪ್ರಾರಂಭ ಎನ್ನುವುದು ಒಳ್ಳೆಯದಾಗಿರಬೇಕು ಹಾಗಾಗಿ ಮಕ್ಕಳ ಕಲಿಕೆಯ ಪ್ರಾರಂಭ ಉತ್ತಮವಾಗಿರಲಿ ಹಾಗೂ ಇದಕ್ಕೆ ಭಗವಂತ ಹಾಗೂ ಗುರುವಿನ ಶುಭ ಆಶೀರ್ವಾದ ಅಗತ್ಯವಾಗಿ ಬೇಕಾಗಿರುವುದರಿಂದ ಈ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ ಮತ್ತು ಇಂದಿನ ಸಮಾಜದ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಗುರು ಹಿರಿಯರ ಬಗೆಗಿನ ಗೌರವ ಅವರಲ್ಲಿ ಕಡಿಮೆಯಾಗುತ್ತಿದ್ದು . ಮಕ್ಕಳಲ್ಲಿ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ.ಎಂದರು

ಈ ಕಾರ್ಯಕ್ರಮದಲ್ಲಿ ಗಣಹೋಮ ಹಾಗೂ ಶಾರದಾ ಪೂಜೆಯ ಮೂಲಕ ಸುಮಾರು 22 ಪುಟಾಣಿಗಳಿಗೆ ಅಕ್ಷರಭ್ಯಾಸ ಮತ್ತು ಹತ್ತನೇ ತರಗತಿಯ 22 ವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಹಾಗೂ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ. ಕೋಶಾಧ್ಯಕ್ಷರಾದ ಯು.ಪಿ. ರಾಮಚಂದ್ರಹೊಳ್ಳ. ನಿರ್ದೇಶಕರಾದ ಬಿ.ಬಿ. ಮಂಜುನಾಥ್. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮಾಲತಿ.ಟಿ.ಆರ್. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ನಾಗರಾಜು.ಸಿ ಮತ್ತು ಉಪಮುಖ್ಯ ಶಿಕ್ಷಕರಾದ ವಸಂತ್ ಹಾರ್ಗೋಡು.ಶಾಲಾ ಶಿಕ್ಷಕರಾದ ಭಕ್ತೇಶ್. ಲೋಕೇಶ್. ಲಿಂಗರಾಜು. ಶ್ವೇತಾ. ಗೀತಾ. ಕುಸುಮ.ಎಸ್.ಶೆಟ್ಟಿ. ಪದ್ಮಶ್ರೀ. ಪ್ರತಾಪ್ ಅಶ್ವಿತಾ. ರಂಜಿತಾ. ಅನುಷಾ. ಆಶಾ. ಪಲ್ಲವಿ. ಪೂಜಾ. ಹಾಗೂ ಶಾಲಾ ವಿದ್ಯಾರ್ಥಿಗಳು. ಭಾಗವಹಿಸಿದರು.


ಬರಹ ಮತ್ತು ಚಿತ್ರ ಕೃಪೆ
ವಸಂತ್ ಹಾರ್ಗೋಡು.
ವರದಿ
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿ.ವಿ

