“ಸಚಿವ ಈಖ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಶಿಕ್ಷಕರು ಮತ್ತು ಮಕ್ಕಳು.”
1 min read
ಸಚಿವ ಈಶ್ವರ್ ಖಂಡ್ರೆ ಕೇಳಿದ ಸಣ್ಣ ಪ್ರಶ್ನೆಗೆ ಶಾಲಾ ಮಕ್ಕಳು ಮಾತ್ರವಲ್ಲ ಶಿಕ್ಷಕರು ಕೂಡ ತಪ್ಪು ಉತ್ತರ ನೀಡಿ ಮುಜುಗರಕ್ಕೀಡಾದ ಘಟನೆ ನಡೆದಿದೆ.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್ ಜಿಲ್ಲೆಯ,ಔರಾದ್ ತಾಲೂಕಿನ,ಕರಿಕ್ಯಾಳ ಗ್ರಾಮದ ಸರಕಾರಿ ಶಾಲೆಗೆ ಭೇಟಿ ನೀಡಿದ್ದಾರೆ.ಸಚಿವ ಈಶ್ವರ್ ಖಂಡ್ರೆ ಶಿಕ್ಷಕನಿಗೆ ಸಾಮಾನ್ಯ ಪ್ರಶ್ನೆ ಕೇಳಿದ್ದಕ್ಕೆ ಶಿಕ್ಷಕರೋರ್ವರು ಉತ್ತರಿಸಲು ತಡ ಬಡಾಯಿಸಿದ್ದಾರೆ.ಶಾಲಾ ಶಿಕ್ಷಕನಿಗೆ ಸಚಿವ ಈಶ್ವರ್ ಖಂಡ್ರೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? ಎಂದು ಪ್ರಶ್ನಿಸಿದ್ದಾರೆ.ಆದರೆ ಪ್ರಶ್ನೆಗೆ ಉತ್ತರ ಹೇಳಲು ಶಿಕ್ಷಕ ತಡಬಡಾಯಿಸಿದ್ದಾರೆ.ಇದರಿಂದ ಸಿಟ್ಟಿಗೆದ್ದ ಸಚಿವ ಈಶ್ವರ್ ಖಂಡ್ರೆ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಇದೇ ವೇಳೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? ಎಂದು ಮಕ್ಕಳಿಗೆ ಸಚಿವ ಈಶ್ವರ್ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.ಮಕ್ಕಳು ಕೂಡ ತಪ್ಪು ಉತ್ತರಿಸಿದ್ದಾರೆ.ಇದರಿಂದ ಸಿಟ್ಟಿಗೆದ್ದ ಸಚಿವ ಈಶ್ವರ್ ಖಂಡ್ರೆ, ನಿಮಗೇನೆ ಗೊತ್ತಿಲ್ಲ, ಇನ್ನು ಮಕ್ಕಳಿಗೆ ಏನು ಕಲಿಸಿ ಕೊಡುತ್ತೀರಿ ಎಂದು ಗರಂ ಆಗಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











