“ಭಗವಂತನ ವಾಕ್ಯಗಳೇ ಆತ್ಮಗಳಿಗೆ ಆಹಾರ.”
1 min read
ಕನಸು, ಕಲ್ಪನೆ, ಭ್ರಮೆ ಮತ್ತು ವಾಸ್ತವದ ನಡುವಿನ ಅಂತರ ಅರಿಯದಿದ್ದರೆ ಜೀವನ ಅವನತಿ ಹೊಂದುವುದು ನೂರಕ್ಕೆ ನೂರರಷ್ಟು ಸತ್ಯ
ನಮ್ಮ ಜೀವನ ಮತ್ತೊಬ್ಬರಿಗೆ ಪಾಠವಾಗದಿದ್ದರು ಪರವಾಗಿಲ್ಲ,
ಆದರೆ ನಮ್ಮ ಜೀವನ ಮತ್ತೊಬ್ಬರಿಗೆ ಆಟವಾಗದಿರಲಿ.
ನಾವೆಲ್ಲರೂ ಆತ್ಮಗಳು ಪರಮಾತ್ಮನ/ ಭಗವಂತನ ಸಂತಾನರು. ಈ ದಿನದ ಸ್ವಯಂ ಭಗವಂತನ/ ಪರಮಾತ್ಮನ ಮಹಾ ವಾಕ್ಯಗಳು ನಮಗೆ ಏನು ಎಂದು ತಿಳಿದುಕೊಳ್ಳೋಣ.ಸ್ವಯಂ ಭಗವಂತನ/ ಪರಮಾತ್ಮನ ಮಹಾ ವಾಕ್ಯಗಳು ಪ್ರತಿಯೊಂದು ಆತ್ಮಗಳಿಗೆ ಶುದ್ಧವಾದ, ಶ್ರೇಷ್ಠವಾದ, ಶಕ್ತಿಶಾಲಿಯಾದ ಭೋಜನ ಆಗಿರುತ್ತದೆ. ಆತ್ಮ ಶಕ್ತಿಶಾಲಿ ಆಗುತ್ತದೆ ಎಂದರೆ ಮನಸ್ಸು ಕೂಡ ಶಕ್ತಿಶಾಲಿ ಆಗುತ್ತದೆ ಎಂದು ಅರ್ಥ. ಯಾವಾಗ ಆತ್ಮ ಶಕ್ತಿಶಾಲಿ ಆಗುತ್ತದೆ, ಆಗ ಆತ್ಮಗಳಲ್ಲಿ ವ್ಯರ್ಥವಾದ ಅಥವಾ ನಕಾರಾತ್ಮಕ ವಿಚಾರಗಳು ಬರಲು ಸಾಧ್ಯವಿಲ್ಲ. ಆಗ ಮಾತ್ರ ಸತ್ಯವಾದ ಹಾಗೂ ಶಾಶ್ವತವಾದ ಸುಖ ಶಾಂತಿಯ ಅನುಭವವನ್ನು ಮಾಡಲು ಸಾಧ್ಯ.
ಬರಹ ಕೃಪೆ.
ಬ್ರಹ್ಮಾ ಕುಮಾರಿ ಸಹೋದರಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










