“ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂಮೀನ್ (SKJM) ಚಿಕ್ಕಮಗಳೂರು ಜಿಲ್ಲಾ ಕಛೇರಿ ಉದ್ಘಾಟನೆ.”
1 min read
ದಿನಾಂಕ 13/06/2023ರಂದು ವಿಶ್ವಕ್ಕೆ ಸರಿಸಾಟಿಲ್ಲದ ಏಕೈಕ ಉಲಮಾ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಪೋಷಕ ಮದರಸ ಅಧ್ಯಾಪಕರ ಸಂಘಟನೆಯಾದ SKJM ಇದರ ಕಛೇರಿ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಕಾರ್ಯದರ್ಶಿ ಕೇರಳದ ಪ್ರಸಿದ್ಧ ಉಲಮಾ ನಾಯಕರು ಹಲವಾರು ಬಿರುದುಧಾರಿಗಳಾದ ಉಲಮಾ ಪಂಡಿತರನ್ನು ಈ ಸಮಾಜಕ್ಕೆ ಸಮರ್ಪಿಸಿದ ಶೈಖುನಾ ಎಂ.ಟಿ.ಉಸ್ತಾದ್ ಕಾರ್ಯಕ್ರಮಕ್ಕೆ ಆಗಮಿಸಿ ಕಛೇರಿಯನ್ನು ಉದ್ಘಾಟನೆ ಮಾಡಿದರು.
ತಖ್ ವಿಯ ಸದರ್ ಮುಅಲ್ಲಿಂ ಸಂಗಮ ಬದ್ರಿಯಾ ಜುಮ್ಮಾ ಮಸೀದಿ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ಸಮಸ್ತ ಮುಫತ್ತಿಷ್ ಉಮರುಲ್ ಫಾರೂಕ್ ದಾರಿಮಿ ಉತ್ತಮವಾದ ರೀತಿಯಲ್ಲಿ ತರಬೇತಿ ನೀಡಿದರು. ಕೊಪ್ಪ ರೇಂಜ್ ಮಜೀದ್ ಅರ್ಷದಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಸಕಲೇಶಪುರ ರೇಂಜ್ ಬದ್ರುದ್ದೀನ್ ದಾರಿಮಿ ಕಾರ್ಯಕ್ರಮದ ಸ್ವಾಗತ ಮಾಡಿದರು. SKJM ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಮುಸ್ತಫ ಯಮಾನಿ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡಿದರು. ನೌಶದ್ ಫೈಝಿ,ಜಮಾಲುದ್ದೀನ್ ಫೈಝಿ,ಸುಲೈಮಾನ್ ಉಸ್ತಾದ್, ಸಿ.ಕೆ.ಇಬ್ರಾಹಿಂ ಹಾಜಿ,ರೇಂಜ್ ವ್ಯಾಪ್ತಿಯ ಎಲ್ಲಾ ಉಸ್ತಾದುರುಗಳು ಆಗಮಿಸಿದರು.ಮೂಡಿಗೆರೆಯ ಬದ್ರಿಯಾ ಜುಮ್ಮಾ ಮಸೀದಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಬರಹ ಕೃಪೆ.
ಎಂ.ಎಸ್.ಆಸೀಫ್.
ಮೂಡಿಗೆರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










