AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ರಕ್ತದಾನ ಮಾಡಿ ಜೀವ ಉಳಿಸುವುದು ಪುಣ್ಯದ ಕೆಲಸ: ಸಿದ್ದೀಕ್ ಜಲಾಲಿ.”

1 min read

ಜಾಗತಿಕ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಮತ್ತು ರೋಟರಿ ಕ್ಯಾಂಪ್ರೊ ರಕ್ತ ನಿಧಿ ಪುತ್ತೂರು ಇವುಗಳ ಸಹಯೋಗ ದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ಬುಧವಾರ ರೋಟರಿ ಕ್ಯಾಂಪ್ರೊ ರಕ್ತ ನಿಧಿ ಕೇಂದ್ರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕಕ್ಕಿಂಜೆ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದ್ ಹಾಗೂ ಪುತ್ತೂರು ಮ್ಯಾದೇ ದೇವುಸ್ ಚರ್ಚ್ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನಸ್ ಜೊತೆಯಾಗಿ ಹೂವಿನ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಅವರು, ನಾವು ಮಾಡುವ ಒಳ್ಳೆಯ ಕೆಲಸದ ಪ್ರತಿಫಲ ದಿಂದ ನಮ್ಮ ಮಕ್ಕಳು, ಕುಟುಂಬಸ್ಥರಿಗೆ ಪುಣ್ಯ ಸಿಗುತ್ತದೆ.ರಾಜಕೀಯ, ಪಕ್ಷ, ಜಾತಿ, ಭೇದವಿಲ್ಲದೆ ಅಗತ್ಯ ಸಮಯದಲ್ಲಿ ಎಲ್ಲರಿಗೂ ಉಪಯೋಗವಾಗುವಂತಹ ರಕ್ತವನ್ನು ನಾವು ದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದರು. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಇತರರ ನೋವನ್ನು ಅರಿತು, ಅವರ ಹಸಿವನ್ನು ನೀಗಿಸುವ, ಇತರರ ಕಷ್ಟಗಳನ್ನು ಕಡಿಮೆ ಮಾಡಿಸುವಂತರ ಅವಕಾಶಗಳು ನಮಗೆ ಬಹಳಷ್ಟು ಸಿಗುತ್ತಿದ್ದು, ಇನ್ನೊಬ್ಬರಿಗೆ ಒಳಿತನ್ನು ಮಾಡುವ ಜೀವನ ಕ್ರಮ ನಾವೆಲ್ಲರೂ ರೂಢಿಸಿಕೊಳ್ಳಬೇಕು.ರಕ್ತದಾನದ ಬಗ್ಗೆ ಇನ್ನಷ್ಟು ಜನರಿಗೆ ಜಾಗೃತಿ ಮೂಡಿ ಹೆಚ್ಚೆಚ್ಚು ಜನರು ರಕ್ತದಾನ ಮಾಡುವ ಮುಖಾಂತರ ಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಸ್ ಡಿ ಪಿಐ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ, ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ಮಾತನಾಡಿದರು.ಪ್ರಶಾಂತ್ ಶೆಟ್ಟಿ, ಶ್ರೀ ಪ್ರಸಾದ್ ಪಾಣಾಜೆ,ಫಾರೂಕ್ ಬಾಯಬೆ, ಸಿದ್ದೀಕ್ ಪುತ್ತೂರು,ಡಾ.ರಾಮಚಂದ್ರ ಭಟ್, ಗಣೇಶ್ ಭಟ್, ಶರೀಫ್ ಸವಣೂರು, ಇಜಾಝ್ ಪರ್ಲಡ್ಕ, ಆರಿಫ್
ಸಾಲ್ಮರ, ಅಭಿಷೇಕ್ ಬೆಳ್ಳಿಪ್ಪಾಡಿ, ಬ್ಲಡ್ ಹೆಲ್ಪ್
ಲೈನ್ ಕರ್ನಾಟಕ(ರಿ) ಇದರ ಕಾರ್ಯನಿರ್ವಾಹಕರಾದ ಇಫಾಝ್ ಬನ್ನೂರು, ಅಲಿ ಪರ್ಲಡ್ಕ, ಸಾಬಿತ್ ಕುಂಬ್ರ, ರಫೀಕ್ ಕೆಮ್ಮಾಯಿ, ರಝೀನ್ ಗುರುವಾಯನಕೆರೆ, ನೌಶಾದ್ ಮಂಚಿ, ಜುನೈದ್ ಬಂಟ್ವಾಳ, ನಾಸಿರ್ ನಾಚಿ, ಲಾರೆನ್ಸ್ ಬೆಳ್ತಂಗಡಿ, ರಿಯಾಝ್ ಕಣ್ಣೂರು, ಮುಸ್ತಫ ಬೋಳಂತೂರು, ಸಿರಾಜ್ ಜೈ ಭಾರತ್ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರೋಟರಿ ಕ್ಯಾಂಪ್ರೊ ರಕ್ತ ನಿಧಿ ಸಿಬ್ಬಂದಿಗಳಾದ ಸಜನಿ ಮಾರ್ಟಿಸ್, ಕುಲದೀಪ್, ಸವಿತಾ, ಶೃತಿ ಬಿ.ಎನ್, ನಮ್ರತಾ, ಅನಿತಾ ಅವರನ್ನು ಅಭಿನಂದಿಸಲಾಯಿತು. ಪ್ಯಾಟ್ರಿಕ್ ಸಿಪ್ರಿಯಸ್ ಮಸ್ಕರೇನಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅಝೀಝ್ ಕೆಮ್ಮಾಯಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಕೃಪೆ.

ಶಾಹಿನ್ ಅತ್ತಾಜೆ.

ಬಂಗಾಡಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *