“ಆಸ್ಪತ್ರೆ ಗೆ ಕೋಟಿ” -ವೈದ್ದರೆಲ್ಲ ಲೂಟಿ ” ‘ಇದೆಂತ ಸರ್ಕಾರಿ ಆಸ್ಪತ್ರೆ….’
1 min read
ಈ ಸಕಲೇಶಪುರ ಸರ್ಕಾರಿ ಆಸ್ಪತ್ರೆ ಅನಧೀಕೃತ ಖಾಸಗೀಕರಣವಾಗಿ ವರ್ಷಗಳೇ ಉರುಳಿಹೋಗಿದೆ ,
ಹಿಂದೊಮ್ಮೆ ಎಂಟು ಕೋಟಿ ಖರ್ಚಿನಲ್ಲಿ ನವೀಕರಣ ಗೊಳಿಸಿದ ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಮಾತ್ರ ಇನ್ನು ಲಭ್ಯವಿಲ್ಲ. ಇಲ್ಲಿನ ವೈದ್ಯರು ಬಡ ಮಹಿಳೆಯ ಹೆರಿಗೆ ಸಮಯವಾಗಿ ಅತೀವ ನೋವಿನಿಂದ ಬಳಲುತ್ತಿದ್ದರು ಹಣ ತನ್ನ ಜೇಬಿಗೆ ಸೇರಿದನಂತರವಷ್ಟೇ ಇಲ್ಲಿ ಚಿಕಿತ್ಸೆ,
ಎಂಟು ಕೋಟಿ ಖರ್ಚಿನಲ್ಲಿ ನವೀಕರಿಸಿದ ಆಸ್ಪತ್ರೆಯಲ್ಲಿ ಹೆಸರಿಗಷ್ಟೇ ಆಧುನಿಕ ಲ್ಯಾಬ್ ವ್ಯವಸ್ಥೆ ಇದೆ.
ಬಹುತೇಕ ರಕ್ತಪರೀಕ್ಷೆಯು ವೈದ್ಯರು ಸೂಚಿಸಿದ ಖಾಸಗಿ ಲ್ಯಾಬ್ ನಲ್ಲೆ ಪರೀಕ್ಷಿಸಬೇಕು ,
ಆಸ್ಪತ್ರೆಯಲ್ಲಿ ಲಭ್ಯವಿರದ ವೈದ್ಯರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸದಾ ಲಭ್ಯವಿರುತ್ತಾರೆ .ಕಮಲದೇವ್ ನರ್ಸಿಂಗ್ ಹೋಂ ,ಹಾಗು ಶ್ರೀನಿವಾಸ ನರ್ಸಿಂಗ್ ಹೋಂ ಗೆ ಬಂದು ಭೇಟಿ ಮಾಡುವಂತೆ ಲಜ್ಜೆ ಇಲ್ಲದೆ ರೋಗಿಗಳೊಂದಿಗೆ ನಡೆದುಕೊಳ್ಳುತ್ತಿದ್ದಾರೆ .ಇಂತಹ ಹಣದಾಹಿ ವೈದ್ಯರ ವಿರುದ್ಧ ಇನ್ನಾದರೂ ಕ್ರಮಕೈಗೊಳ್ಳಬೇಕು .
ಈ ವಿಷಯ ತಿಳಿದ ಶಾಸಕರಾದ ಸಿಮೆಂಟ್ ಮಂಜು ಆಸ್ಪತ್ರೆಗೆ ಭೇಟಿ ನೀಡಿ ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








