“ಶಾಸಕರ ಪಥ ಅಭಿವೃದ್ಧಿಯತ್ತ ಸಾಗಲಿ : ಡಿ.ಎಂ.ಮಂಜುನಾಥ ಸ್ವಾಮಿ.”
1 min read
ಒಂದು ಸಾಮಾನ್ಯ ಮಧ್ಯಮ ವರ್ಗದ ಕೃಷಿ ಕುಟುಂಬದಿಂದ ಬಂದು, ಕ್ಷೇತ್ರದ ಮತದಾರರ ಅಭಿಪ್ರಾಯದ ಪ್ರಕಾರ ಬರೋಬ್ಬರಿ 60ಕೋಟಿಗೂ ಹೆಚ್ಚು ಖರ್ಚು ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನನ್ನ ಬಾಲ್ಯ ಮಿತ್ರನಾಗಲಿ,
ಹೆಂಚಿನ ಮಣ್ಣಿನ ಗೋಡೆಯ ಸ್ವಂತ ಸಣ್ಣ ಮನೆಯೊಂದರಲ್ಲಿ,ಸರ್ಕಾರಿ ಇಲಾಖೆಯ ಡಿ ಗ್ರೂಪ್ ನೌಕರನ ಮಗನಾಗಿ ಹುಟ್ಟಿ, ಸುಮಾರು ಎರಡುವರೆ ದಶಕಗಳಿಂದ ನನಗೆ ಅತ್ಯಂತ ಆತ್ಮೀಯರಾಗಿ,ಅಂದಾಜು 20 ಕೋಟಿಗೂ ಹೆಚ್ಚು ಖರ್ಚು ಮಾಡಿ ಅದೇ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸೆಡ್ಡು ಹೊಡೆದು ಗೆದ್ದ ಹಿರಿಯ ಮಿತ್ರನಾಗಲಿ,
ಚುನಾವಣಾ ರಾಜಕೀಯದಲ್ಲಿ ಸೋತ- ಗೆದ್ದ ಈ ಇಬ್ಬರು ಕೊಡ ನನಗೆ ಆದರ್ಶದ ಸಂಕೇತಗಳಲ್ಲ,
ಒಂದು ವೋಟು ಕೊಡುವುದಾದರೆ ಮಾತ್ರ, ಅ ವೋಟು ಕೊಡುವ ಮುಂಚೆ ಒಂದೇ ಒಂದು ನೋಟು ಕೊಡಿ ಎಂದು ಟವೆಲ್ ಹಿಡಿದು, ಕೇವಲ ಒಂದೊಂದು ರೂಪಾಯಿಯನ್ನು ಮಾತ್ರ ಸಂಗ್ರಹ ಮಾಡಿ , ಹೀಗೆ ಸಂಗ್ರಹವಾದ ಹತ್ತು ಸಾವಿರ ರೂ ನಲ್ಲಿ ಒಂದು ವಿಧಾನಸಭಾ ಚುನಾವಣೆಯನ್ನು ಮಾಡಬಹುದೆಂದು ತೋರಿಸಿಕೊಟ್ಟು , ಚಿಕ್ಕಮಗಳೂರು ವಿಧಾನಸಭಾ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ,ಕೇವಲ ಏಳುನೂರು ಮೂವತ್ತು ಮತಗಳ ಅಂತರದಲ್ಲಿ ಸೋತು, ಜನಮನದಲ್ಲಿ ಶಾಶ್ವತವಾಗಿ ಗೆದ್ದು, ರೈಲ್ವೆ ಅಪಘಾತದಲ್ಲಿ ದುರಂತ ಮರಣವನ್ನು ಅಪ್ಪಿ, ದ್ವೇಷದಿಂದ ದೇಶ ಕಟ್ಟಲು ಹೋಗದೆ,ಪ್ರೀತಿ ಮತ್ತು ಪ್ರಾಮಾಣಿಕತೆಯೊಂದಿಗೆ ರಾಜಕಾರಣ ಮಾಡಿದರೆ, ಸತ್ತ ಮೇಲೂ ನಾವು ಬದುಕಬಹುದೆಂದು ತೋರಿಸಿ,ಒಬ್ಬ ಮಹಾನ್ ದಾರ್ಶನಿಕನಂತೆ ನಮ್ಮ ನಡುವೆ ಇದ್ದು ನಮಗೆಲ್ಲ ಮಾರ್ಗದರ್ಶಿಯಾಗಿದ್ದ ಸಂಗಾತಿ ಬಿ, ಕೆ, ಸುಂದರೇಶ್, ನನಗೆ ಮಾತ್ರವಲ್ಲ, ಪ್ರಾಮಾಣಿಕ ರಾಜಕಾರಣ ಮಾಡುವವರಿಗೆ ಮತ್ತು ಅಂತ ಆದರ್ಶ ರಾಜಕಾರಣವನ್ನು ಬಯಸುವವರಿಗೆ ನಿಜವಾದ ಉದಾಹರಣೆಯಾಗಿದ್ದಾರೆ,
ರಾಜಕೀಯವಾಗಿ ನಾನು ಯಾವುದೇ ಪಕ್ಷದ ಸದಸ್ಯ ನಲ್ಲದಿದ್ದರೂ ಕೂಡ,ಇಂತಹ ಆದರ್ಶದ ಚುನಾವಣೆಯಲ್ಲಿ ನಾನು ಕೂಡ ಅವರೊಟ್ಟಿಗೆ ಅತಿ ಹತ್ತಿರದಿಂದ ಭಾಗಿಯಾಗಿದ್ದೆ ಎಂಬುದು ಈಗ ಇತಿಹಾಸ,
ಚಿಕ್ಕಮಗಳೂರಿನಲ್ಲಿ ದ್ವೇಷ ರಾಜಕಾರಣ ಮರೆಯಾಗಿ, ಕೇವಲ ಭಾವನಾತ್ಮಕ ಮಾತುಗಳನ್ನು
ಬಂಡವಾಳವನ್ನಾಗಿ ಮಾಡಿಕೊಳ್ಳುವುದನ್ನು ಕೈಬಿಟ್ಟು,
ಅಭಿವೃದ್ಧಿ ರಾಜಕಾರಣ ಆರಂಭವಾಗಲಿ ಎಂಬುದು ಜನಮನದ ಆಶಯವಾಗಿದೆ,
ಪ್ರಜಾಪ್ರಭುತ್ವದ ಸೌಂದರ್ಯವನ್ನು ಎತ್ತಿ ಹಿಡಿಯುವ ಅವಕಾಶ ಗೆದ್ದ ಶಾಸಕರ ಮೇಲೆ ಹೆಚ್ಚು ಗುರುತರವಾಗಿದೆ,
ಆ ಹಾದಿಯಲ್ಲಿ ನೂತನ ಶಾಸಕರ ಪಯಣ ಸಾಗುತ್ತಾ,
ಅಭಿವೃದ್ಧಿ ರಾಜಕಾರಣ ಅವರ ಬದುಕಿನ ಮುನ್ನುಡಿ ಆಗಲಿ,
ನೀವು ಸರಿಯಾದ ಮುನ್ನುಡಿಯ ಹೆಜ್ಜೆ ಇಟ್ಟರೆ, ಅ ಹೆಜ್ಜೆಗೊಂದು ಹಿನ್ನುಡಿಯನ್ನು ಇಡೀ ಜನವರ್ಗ ತಿರುಗಿ ನೋಡುವಂತೆ ನಾನೇ ಬರೆಯುತ್ತೇನೆ.
ಬರಹ ಕೃಪೆ.
ಡಿ,ಎಂ,ಮಂಜುನಾಥಸ್ವಾಮಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






