ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಬಾಲಮೇಳ ಕಾರ್ಯಕ್ರಮ
1 min read
ಬಣಕಲ್ ಹೋಬಳಿ ಗ್ರಾಮದ ಸಮುದಾಯ ಭವನದಲ್ಲಿ ಶ್ರೀ ಸಂಚಿಹೊನ್ನಮ್ಮ ಮಹಿಳಾ ಮಂಡಳಿ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಆದಿಶಕ್ತಿ ಮಹಿಳಾ ಪತ್ತಿನ ಸಹಕಾರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಡಿಗೆರೆ ಸ್ಥಳೀಯ ಸಂಘ ಸಂಸ್ಥೆಗಳು ಮೂಡಿಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಬಿ ಹೊಸಳ್ಳಿ ಹಾಗೂ ಬಿ ಹೊಸಳ್ಳಿ ಮಹಿಳಾ ಸ್ವಸಹಾಯ ಸಂಘಗಳು ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಬಾಲಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಶಕ್ತಿ ಸಂಘದ ಸಂಸ್ಥಾಪಕರಾದ ಹಾಗೂ ಮಾಜಿ ಸಚಿವರು ಮತ್ತು ಮಾಜಿ ಶಾಸಕರಾದ ಶ್ರೀಮತಿ ಡಾಕ್ಟರ್ ಮೋಟಮ್ಮನವರು ಕಾರ್ಯಕ್ರಮವನ್ನು ಉದ್ಘಾಟನೆ ಹಾಗೂ ಮಹಿಳಾ ರತ್ನಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಘಾಟಿಸಿ ಮಾತನಾಡಿದ ಶ್ರೀಯುತರು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ವಾಕ್ಯದೊಂದಿಗೆ ಪ್ರತಿಯೊಂದು ಮನೆ, ಗ್ರಾಮ, ಸಮಾಜ ಸುಸ್ಥಿತಿಯಲ್ಲಿರಬೇಕಾದರೆ ಮಹಿಳೆಯರ ಪಾತ್ರ ಅತಿ ಮುಖ್ಯ , ಮಹಿಳೆಯರು ಸಬಲರಾದರೆ ಇಡೀ ವ್ಯವಸ್ಥೆಯೇ ಬದಲಾಗುತ್ತದೆ ಎಂಬ ಆಸೆಯಿಂದ ಇಪ್ಪತ್ತು ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯದಲ್ಲಿ ಮಹಿಳಾ ಸ್ತ್ರೀಶಕ್ತಿ ಸಂಘವನ್ನು ಸ್ಥಾಪಿಸಲಾಯಿತು. ಅದರಿಂದಾಗಿ ಇಂದಿಗೂ ಕೂಡ ಮಹಿಳೆಯರು ಹೆಚ್ಚು ಆರ್ಥಿಕವಾಗಿ ಸಬಲರಾಗುವ ಮೂಲಕ ತಾನು ತನ್ನ ಮನೆ ತನ್ನ ಕುಟುಂಬ ಹಾಗೂ ಸಮಾಜದ ಸುಂದರ ವ್ಯವಸ್ಥೆಗೆ ಕಾರಣರಾಗಬೇಕು, ಹಾಗೆಯೇ ತನ್ನ ಮೇಲೆ ದಬ್ಬಾಳಿಕೆ ದೌರ್ಜನ್ಯ ಮತ್ತು ಅತ್ಯಾಚಾರಗಳು ನಡೆದಾಗ ಅದನ್ನು ಎದುರಿಸುವ ಧೈರ್ಯವನ್ನು ಕೂಡ ಹೊಂದಿರಬೇಕು, ಈ ಎಲ್ಲದಕ್ಕೂ ಮಹಿಳೆಯರು ತಮ್ಮ ಒಗ್ಗಟ್ಟನ್ನ ತೋರಿಸಬೇಕು ಎಂದು ನುಡಿದರು. ಶ್ರೀ ಸಂಚಿಹೊನ್ನಮ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾಧಾ ಶ್ರೀಮತಿ ಕಮಲಾಕ್ಷಮ್ಮ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ತಮ್ಮ ಮೇಲುಗೈಯನ್ನು ಸಾಧಿಸಬೇಕು ಅವಕಾಶಗಳು ಸಿಕ್ಕ ತಕ್ಷಣವೇ ಅವಕಾಶವನ್ನು ಬಳಸಿಕೊಂಡು ಇತಿಹಾಸ ಪುಟದಲ್ಲಿರುವ ವೀರ ವನಿತೆಯರಂತೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 50% ರಷ್ಟು ಮಹಿಳೆಯರೇ ಹೆಚ್ಚಿದ್ದಾರೆ ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆ ಗಣನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ದೌರ್ಜನ್ಯ ಸಮಸ್ಯೆಗಳಾದಾಗ ಸಹಾಯವಾಣಿಯ ಮೂಲಕ ಆ ಸಮಸ್ಯೆಯನ್ನು ಬಗೆಹರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಪ್ರತಿಯೊಬ್ಬ ಮಹಿಳೆ ಕೂಡ ಪಡೆಯಬೇಕು ಎಂದು ನುಡಿದರು. ಬಾಲ ಮೇಳ ಕಾರ್ಯಕ್ರಮದಲ್ಲಿ ಹೊಕ್ಕಳ್ಳಿ, ಹೊಸ್ಕೆರೆ ಮತ್ತು ಬಿ ಹೊಸಳ್ಳಿ ಅಂಗನವಾಡಿ ಮಕ್ಕಳು ಭಾಗವಹಿಸಿದ್ದರು . ಬಾಲಮೇಳ ಮಕ್ಕಳಿಗಾಗಿ ಬರವಣಿಗೆ ಸ್ಪರ್ಧೆ ಛದ್ಮವೇಶ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಆಟೋಟಗಳನ್ನು ಇಡಲಾಗಿತ್ತು , ಇವುಗಳಲ್ಲಿ ಗೆದ್ದಂತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು . ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗದೆ ಊರಿನ ಪ್ರತಿಯೊಬ್ಬ ಗ್ರಾಮಸ್ಥರೂ ಕೂಡ ಆಟೋಟಗಳನ್ನು ಇಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು ಇದರಲ್ಲಿ ಗೆದ್ದಂತಹ ಪ್ರತಿಯೊಬ್ಬ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು . ಅಂಗನವಾಡಿ ಮಕ್ಕಳಿಂದ ವಿವಿಧ ಪ್ರಕಾರದ ನೃತ್ಯಗಳು ಅಭಿನಯ ಗೀತೆಗಳು ಗೀತೆಗಳನ್ನು ಕೂಡ ಆಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು . ಹಾಗೆಯೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಮ್ಮೂರಿನ ಮಹಿಳಾ ಮಣಿಗಳಿಂದ ಹಾಗೂ ಹೊಸ್ಕೆರೆ ಮಹಿಳಾಮಣಿಗಳಿಂದ ಜಾನಪದ ಗೀತೆಗಳು, ನೃತ್ಯಗಳು, ಮೂಡಿಬಂದವು. ಈ ಸಂದರ್ಭದಲ್ಲಿ ಗಣ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ಹೊಸಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಸುನಿತಾ ರವರು, ಮುಖ್ಯ ಅತಿಥಿಗಳಾದ ಶ್ರೀಮತಿ ನಯನಾ ಮೋಟಮ್ಮ ರವರು, ಊರಿನ ಹಿರಿಯರು ಆದ ಜಯರಾಮ್ ಗೌಡ್ರು , ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿಯವರು, ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಯುತ ಆಶ್ರಿತ್ ರವರು, ಗ್ರಾಮ ಪಂಚಾಯಿತಿಯ ಪಿಡಿಒ ಆದಂತಹ ಸಿಂಚನ ಮೇಡಂರವರು ಸಂಚಿ ಹೊನ್ನಮ್ಮ ಮಹಿಳಾ ಮಂಡಳಿಯ ಕಾರ್ಯದರ್ಶಿ ಅಂಥ ಶ್ರೀಮತಿ ದೇವಕಿ ಮೆಡಮ್ ರವರು ಆರೋಗ್ಯ ಇಲಾಖೆಯ ಸಿಬ್ಬಂದಿಯ ಕಿರಣ್ ಮೆಡಮ್ ರವರು, ಊರಿನ ಮುಖಂಡರಾದ ವೆಂಕಟೇಶ್ , ಅನಂತ್ ಎಂಎಸ್ ನಿತಿನ್ ರಾಜ್ ಪೂರ್ಣಿಮಾ, ಭಾಗ್ಯ ಆಶಾ, ಎಸ್ ಡಿಎಂಸಿ ಅಧ್ಯಕ್ಷರಾದ ದಿನೇಶ್ ಶಿಕ್ಷಕರಾದ ಪೂರ್ಣಿಮಾ ಮೇಡಂರವರು ಅಂಗನವಾಡಿ ಕಾರ್ಯಕರ್ತೆ ಹಾಗೂ ಕಾರ್ಯಕ್ರಮದ ಆಯೋಜಕರಾದ ಶ್ರೀಮತಿ ಗೌರಮ್ಮ ರವರು ಅಂಗನವಾಡಿ ಕಾರ್ಯಕರ್ತೆ ಹಾಗೂ ಹೊಸ್ಕೆರೆ ಅಂಗನವಾಡಿ ಕಾರ್ಯಕರ್ತೆಯರು ಬಗ್ಗಸಗೋಡು ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಊರಿನ ಹಿರಿಯರಾದ ಪದ್ಮಯ್ಯ, ಈರಯ್ಯ ಬೊಮ್ಮಯ್ಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮಹಿಳಾ ಸ್ವಸಹಾಯ ಸಂಘಗಳ ಸರ್ವ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.