लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ಘಟಕದ ಸೇವಾದೀಕ್ಷ ಕಾರ್ಯಕ್ರಮ

1 min read
Featured Video Play Icon

ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ಘಟಕದ ಸೇವಾದೀಕ್ಷ ಕಾರ್ಯಕ್ರಮ ದಿನಾಂಕ ೨೭-೨-೨೦೨೨ರ ಭಾನುವಾರ ಜೆಸಿ ಭವನದಲ್ಲಿ ನಡೆÄತು ಅಧ್ಯಕ್ಷರ ಸ್ಥಾನವನ್ನು ಪೂರ್ವ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಹಳೆಕೋಟೆ ರಮೇಶ್ ರವರು ವಹಿಸಿದ್ದರು ಸಮಾರಂಭದ ಉದ್ಘಾಟನೆಯನ್ನು ಮೂಡಿಗೆರೆ ಕ್ಷೇತ್ರದ ಶಾಸಕರಾದ ಎಂಪಿ ಕುಮಾರಸ್ವಾಮಿ ಅವರು ನೆರವೇರಿಸಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಸದಾ ನಡೆಯುತ್ತಿರಲಿ ನಮ್ಮಗಳ ಸಹಕಾರ ಇದೆಯೆಂದು ತಿಳಿಸಿದರು ತಾÄ ಭುವನೇಶ್ವರಿಯ ಭಾವಚಿತ್ರವನ್ನು ಅನಾವರಣಗೊಳಿಸಿ ಮಾನ್ಯ ಎಂಕೆ ಪ್ರಾಣೇಶ್ ವಿಧಾನಪರಿಷತ್ ಸದಸ್ಯರು ಸಾಹಿತ್ಯ ಪರಿಷತ್ತಿನ ಕೆಲಸಗಳನ್ನು ಮಾಡಲು ಇಚ್ಚಾಶಕ್ತಿ ಬದ್ಧತೆ ಇರಬೇಕು ನಾಡು-ನುಡಿ ಜಲ ಪ್ರಶ್ನೆಗಳು ಬಂದಾಗ ಸಂಘಟಿತರಾಗಬೇಕು ಎಂದು ತಿಳಿಸಿದರು ಜಿಲ್ಲಾ ಅಧ್ಯಕ್ಷರಾದ ಶ್ರೀ ಸೂರಿ ಶ್ರೀನಿವಾಸ್ ರವರು ತಾಲೂಕಿನ ಕಾರ್ಯಕಾರಿಣಿ ಸದಸ್ಯರುಗಳಿಗೆ ಪ್ರತಿಜ್ಞೆ ಸ್ವೀಕಾರ ನೆರವೇರಿಸಿದರು ನಿಕಟಪೂರ್ವ ಅಧ್ಯಕ್ಷರಾದ ಮಗ್ಗಲ ಮಕ್ಕಿ ಗಣೇಶ್ ಹಾಲಿ ಅಧ್ಯಕ್ಷರಾದ ಹೆಚ್ ಎಂ ಶಾಂತಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ನೆರವೇರಿಸಿದರು ಹಾಗೂ ಹೆಚ್ ಎಂ ಮಹೇಶ್ ಪ್ರಾಧ್ಯಾಪಕರು ಕನ್ನಡ ಅಧ್ಯಯನ ವಿಭಾಗ ಐಡಿ ಎಸ್ ಜಿ ಕಾಲೇಜ್ ಚಿಕ್ಕಮಗಳೂರು ಇವರು ಆಶಯ ನುಡಿಗಳಲ್ಲಿ ಕನ್ನಡ ಕಟ್ಟುವ ಕೆಲಸ ನಡೆಯಬೇಕು ಹಳ್ಳಿಹಳ್ಳಿಗೆ ಮನ ಮನೆಗಳಿಗೆ ತಲುಪಿಸುವ ಕಾರ್ಯ ನಿಮ್ಮಿಂದ ಆಗಲಿ ನವ ನಾವಿನ್ಯ ಕಾರ್ಯಕ್ರಮಗಳು ನಡೆಯಲಿ ಎಂದು ಆಶಯ ನುಡಿಗಳನ್ನು ನುಡಿದರು ಹೋಬಳಿ ಅಧ್ಯಕ್ಷರುಗಳಾದ ಎಂ ಎಸ್ ನಾಗರಾಜ್ ಆದರ್ಶ ತರವೇ ಭಾಗ್ಯ ಲಕ್ಷ್ಮಣಗೌಡ ಹಾಗೂ ರವಿ ಪಟೇಲ್ ಕೂವೆ ಸಮಾರಂಭದಲ್ಲಿ ಉಪಸ್ಥಿತರಿದ್ದರು ಕಡೂರು ಚಿಕ್ಕಮಗಳೂರು ತಾಲ್ಲೂಕಿನಾಧ್ಯಕ್ಷರುಗಳುಹಾಜರಿದ್ದರು ಜಿಲ್ಲಾ ಗೌರವ ಕಾರ್ಯದರ್ಶಿ ಎಸ್ ಎಸ್ ವೆಂಕಟೇಶ್ ಕೋಶಾಧ್ಯಕ್ಷರಾದ ಆರ್ ಪ್ರಕಾಶ್ ,ಮೂಡಿಗೆರೆ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಯುತ ಹೇಮಂತ್ ರಾಜ್, ಕನ್ನಡದ ಕಟ್ಟಾಳು ಹೊರಟ್ಟಿ ರಘು ತಾಲೂಕ್ ಕಾರ್ಯದರ್ಶಿಗಳಾದ ಪ್ರಕಾಶ, ನಾರಾಯಣ್ ವಿಪಿ, ಕೋಶಾಧ್ಯಕ್ಷರಾದ ಬಿಎ ತಿಮ್ಮೇಗೌಡ ಮುಂತಾದವರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *