ಕ್ರೀಡೆಯು ಶಾರೀರಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ || ಡಾ.ಸಿ ಆರ್ ಮೋಹನ್ ಕುಮಾರ್
1 min read
ಕಳಸ :
ಕ್ರೀಡೆ ಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆ ಗಳಿಗೂ ಸಹಾಯ ವಾಗುತ್ತದೆ ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ ಆರ್ ಮೋಹನ್ ಕುಮಾರ್ ಹೇಳಿದರು..
ಅವರು ಇಂದು ಕಳಸ ಪಟ್ಟಣದಕಾಲೇಜು ಮೈದಾನ ದಲ್ಲಿ ಯುನೈಟೆಡ್ ಕ್ಲಬ್ ವತಿÄಂದ ಆಹ್ವಾನಿತ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಉದ್ಘಾಟಿಸಿ ಮಾತನಾಡಿದರು.
ಶಾರೀರಕ ಮತ್ತು ಮಾನಸಿಕ ಬೆಳವಣಿಗೆಗೆ ಶಿಸ್ತು ಸಹಬಾಳ್ವೆ ಗಳಲ್ಲದೆ ಪ್ರತಿಯೊಬ್ಬರಲ್ಲು ಪ್ರೀತಿ. ವಿಶ್ವಾಸ. ಸ್ನೇಹ ಸಂಬAಧ ಗಳ ವೃದ್ಧಿ ಗೂ ಕ್ರೀಡೆ ಗಳು ಅಗತ್ಯ. ಯುವಕರು ತಮ್ಮ ಸಾಮರ್ಥ್ಯ ವನ್ನು ಅರಿತು ಕೊಂಡು ಅತ್ಮ ವಿಶ್ವಾಸ ದೊಂದಿಗೆ ದಿಟ್ಟ ಹೆಜ್ಜೆ ಗಳನ್ನು ಇರಿಸಬೇಕು ಆಲೋಚನೆ ಗಳು ನಿರ್ಧಾರ ಗಳು ಅಚಲ ವಾಗಿದ್ದಾಗ ಸಾಧನೆಯು ಉತ್ತುಂಗ ಕ್ಕೆ ಏರಲು ಸಾಧ್ಯ ಎಂದರು….
ಮುಖ್ಯ ಅತಿಥಿ ಗಳಾದ ಕರ್ನಾಟಕ ಪಬ್ಲಿಕ್ ಶಾಲೆ ಯ ಮುಖ್ಯ ಶಿಕ್ಷಕ ಶ್ರೀ ಶಿವಕುಮಾರ ಸ್ವಾಮಿ ರವರು ಮಾತನಾಡುತ್ತಾ
ಸ್ಪರ್ಧಾತ್ಮಕ ಯುಗ ದಲ್ಲಿ ಕ್ರೀಡೆ ಗಳು ಯುವಕರಲ್ಲಿ ಸ್ಪರ್ಧಾ ಮನೋಭಾವ ವನ್ನು ಮೂಡಿಸಲು ಸಹಾಯ ಮಾಡುತ್ತದೆ. ಧೈರ್ಯ ಮತ್ತು ಸಾಹಸ ಗುಣ ಗಳನ್ನು ವೃದ್ಧಿ ಸುತ್ತದೆ.. ಸೋಲೇ ಗೆಲುವಿನ ಸೋಪಾನ ಹಾಗು ಯುವಕರಿಗೆ ವ್ಯಕ್ತಿತ್ವ ವಿಕಸನ ಕ್ಕೆ ಕಾರಣ ವಾಗುತ್ತದೆ ಎಂದರು.. ಕಾರ್ಯಕ್ರಮ ದಲ್ಲಿ ಜೇಸಿಐ ಕಳಸ ಕಾರ್ಯದರ್ಶಿ ಶ್ರೀಕಾಂತ್. ಯುನೈಟೆಡ್ ಕ್ಲಬ್ ನ ಮದು. ಅಮಿರ್ ಹಾಗು ಶರತ್ ಕ್ರೀಡಾಪಟುಗಳು.ವಿದ್ಯರ್ಥಿಗಳು ಗ್ರಾಮಸ್ಥರು ಹಾಗು ಕ್ರೀಡಾಭಿಮಾನಿಗಳು ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.