..ಶ್ರದ್ದಾಂಜಲಿ..
1 min read
..ಶ್ರದ್ದಾಂಜಲಿ..
ಕಡೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ, ಈ ದಿನ ವಿಧಿವಶರಾದ ಕನ್ನಡ ನಾಡಿನ ಅದಮ್ಯ ಚೇತನ, ಹಿರಿಯ ಸಾಹಿತಿಗಳಾದ ನಾಡೋಜ ಚೆನ್ನವೀರ ಕಣವಿಯವರಿಗೆ ಶ್ರದ್ಧಾಂಜಲಿಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಸಿಂಗಟಗೆರೆ ಸಿದ್ಧಪ್ಪ, ಗೌರವ ಕಾರ್ಯದರ್ಶಿ ನಂಜುಂಡಸ್ವಾಮಿ, ಗೌರವ ಕೋಶಾಧ್ಯಕ್ಷರಾದ ವಡೇರಹಳ್ಳಿ ಅಶೋಕ್, ಜಿಲ್ಲಾ ಬಾಲ ಸಾಹಿತ್ಯ ವಿಭಾಗದ ಸಂಚಾಲಕರಾದ ಆರ್.ಜಿ.ಕೃಷ್ಣಸ್ವಾಮಿ, ಕಡೂರು ನಗರ ಘಟಕದ ಕ.ಸಾ.ಪ.ಅಧ್ಯಕ್ಷರಾದ ಶ್ರೀಯುತ ಹೊ.ರಾ.ಕೃಷ್ಣಕುಮಾರ್,ಕಸಬಾ ಹೋಬಳಿ ಕ.ಸಾಪ.ಅಧ್ಯಕ್ಷರಾದ ಶ್ರೀಯುತ ಕೆ.ಪಿ.ರಾಘವೇಂದ್ರ, ಕ.ಸಾ.ಪ.ಸದಸ್ಯರಾದ ಮಚ್ಚೇರಿ ಮಹೇಶ್ವರಪ್ಪ, ಕ್ಯಾಂಟೀನ್ ರಮೇಶ್ ಸೇರಿದಂತೆ ಮುಂತಾದವರು ಹಾಜರಿದ್ದು,ಹಿರಿಯ ಸಾಹಿತ್ಯ ಚೇತನ ಚೆನ್ನವೀರ ಕಣವಿಯವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಸಂತಾಪ ಸೂಚಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.