लाइव कैलेंडर

February 2025
M T W T F S S
 123
45678910
11121314151617
18192021222324
25262728293031
07/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂಕ್ರಾಂತಿ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ

1 min read
Featured Video Play Icon

ಸಂಕ್ರಾಂತಿ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ

ಹಬ್ಬಗಳು ಸೌಹಾರ್ದತೆಗೆ ವೇದಿಕೆಯಾಗಲಿ

ಸಂಕ್ರಾಂತಿ ಕವಿಗೋಷ್ಠಿ ಹಾಗೂ ಈಗಲ್ ಪತ್ರಿಕೆಯ 20 ನೇ ವಾರ್ಷಿಕೋತ್ಸವ

ಮೂಡಿಗೆರೆ:ಹಬ್ಬಗಳು ಸೌರ್ಹಾದತೆಯ ವೇದಿಕೆಯಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಹೇಳಿದರು.

ಬಹುಭಾಷಾ ಸಾಹಿತಿ ಹಾಗೂ ಸಂಪಾದಕರಾದ ಸುಂದರ ಬಂಗೇರಾ ಅವರ ನಿವಾಸದಲ್ಲಿ ನಡೆದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಈಗಲ್ ಪತ್ರಿಕೆಯ 20 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯದ ಸಾಮೀಪ್ಯದಿಂದ ಬದುಕಿನ ಕುರಿತ ಒಳನೋಟಗಳು ಸಿಗುತ್ತವೆ. ಕವಿಗೋಷ್ಠಿಗಳಂಥ ಕಾರ್ಯಕ್ರಮಗಳು ಎಲೆಮರೆಯ ಪ್ರತಿಭೆಗಳಿಗೆ ವೇದಿಕೆಯಾಗಲಿ ಎಂದರು.

ಬಹುಭಾಷಾ ಸಾಹಿತಿ ಹಾಗೂ ಸಂಪಾದಕರಾದ ಸುಂದರ ಬಂಗೇರಾ ಮಾತನಾಡಿ ಮುಂದಿನ ದಿನಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಉದ್ದೇಶಿಸಿದ್ದು ಇದಕ್ಕೆ ಸಾಹಿತ್ಯಾಭಿಮಾನಿಗಳ ಸಹಕಾರ ಇರಲಿ‌ ಎಂದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಎಂ ಎಸ್ ನಾಗರಾಜು, ಪತ್ರಕರ್ತ ಹಾಗೂ ಲೇಖಕ ನಂದೀಶ್ ಬಂಕೇನಹಳ್ಳಿ, ಸಾಹಿತಿಗಳಾದ ಪ್ರದೀಪ್ ಸಾಲಿಯಾರ್, ವಿಶ್ವ ಹಾರ್ಲಗದ್ದೆ, ಪರಿಸರ ಚಿಂತಕ, ಸಾಹಿತಿಗಳಾದ ಧನಂಜಯ ಜೀವಾಳ, ಸಾಹಿತಿ ಅಲ್ತಾಫ್ ಬಿಳಗುಳ,
ಸ್ಥಳೀಯರಾದ ಷಣ್ಮುಖ ಮೂಡಿಗೆರೆ, ಲಕ್ಷ್ಮಣ್ ಶೆಟ್ಟಿ ಮೂಡಿಗೆರೆ,
ಸಮಾಜ ಸೇವಕರಾದ
ಅಸೈನಾರ್ ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Fresher Jobs | jobs hiring | job openings Udyog mela | jobs employment | udyog kendra – Nisarga Care

Good facilities and Best treatment Center Bangalore |

About Author