लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ

1 min read
Featured Video Play Icon

ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ

ಸ ಹಿ ಪ್ರಾ ಶಾಲೆ ಬೆಟ್ಟದಮನೆ ಮೂಡಿಗೆರೆ ತಾಲ್ಲೂಕು
ಇಲ್ಲಿ ದಿನಾಂಕ 12/01/2022 ರಂದು ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಭಾರತದ ರಾಷ್ಟೀಯ ಪೂರ್ವ ನಿರ್ದೇಶಕರು ಹಾಗೂ KSG-MEWA ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಜೆಸಿ ಡಾ.ಫೈರೋಜ್ ಅಹಮದ್ ಮಾತನಾಡಿ ಜೆಸಿಐ ಜನ್ನಾಪುರ ಸಮೃದ್ಧಿಯು ಹೊಸ ಹೊಸ ಯುವಕರನ್ನು ಜೆಸಿಐ ಗೆ ಸೇರಿಸಿ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡುತ್ತಾ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಯುವ ಪಡೆಗೆ ನಾಯಕತ್ವ ದೇಶಾಭಿಮಾನ ಬೆಳೆಸುವ ಕಾರ್ಯಗಳು ಈ ಸಂಸ್ಥೆಯಿಂದ ಆಗಬೇಕು ಎಂದು ತಿಳಿಸಿದರು.ನೂತನ ಅಧ್ಯಕ್ಷರಾದ ಜೆಸಿ ಸಂದೀಪ್ ಜೇನುಬೈಲುರವರು ಭಾಗವಹಿಸಿದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಭಾರತ ಸೇವಾದಳದ ಸ್ವಯಂ ಸೇವಕರಿಗೆ ಮತ್ತು ಶಾಖಾ ನಾಯಕರಿಗೆ ಪ್ರಮಾಣವಚನ ಬೋದಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜೆಸಿಐ ಜನ್ನಾಪುರ ಸಮೃದ್ಧಿಯ ಪೂರ್ವ ಅಧ್ಯಕ್ಷರಾದ
ಜೆಸಿ ಸಂತೋಷ್ ರವರು ಯಾರಲ್ಲಿ ಭರವಸೆ ಮತ್ತು ಆತ್ಮವಿಶ್ವಾಸ ಇರುತ್ತದೆಯೂ ಅಂತವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆಂದು ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನುಡಿ ನುಡಿದರು . ಶಾಲಾ ಶಿಕ್ಷಕರಾದ ಶ್ರೀ ಚನ್ನಬಸಯ್ಯ ರವರು ವಿವೇಕಾನಂದರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದರು.ವಿವೇಕಾನಂದರ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಚಿನ್ನಿಗ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗೋಣಿಬೀಡು ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷರಾದ ಜಿಸಿ ಪ್ರಹ್ಲಾದ್ ವಿತರಿಸದರು.
ಕಾರ್ಯಕ್ರಮದಲ್ಲಿ ಘಟಕದ ಉಪಾಧ್ಯಕ್ಷರಾದ ಜೇಸಿ ವಿಶ್ವಾಸ್ ಮರೆಬೈಲು ಶಾಲಾ ಶಿಕ್ಷಕರಾದ ಶ್ರೀಮತಿ ಜ್ಯೋತಿ ಭಾಗವಹಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Fresher Jobs | jobs hiring | job openings Udyog mela | jobs employment | udyog kendra – Nisarga Care

Good facilities and Best treatment Center Bangalore |

About Author