ಜೆಸಿಐ ಜನ್ನಾಪುರ ಸಮೃದ್ಧಿ ಪದಗ್ರಹಣ ಸಮಾರಂಭ
1 min read
ಜೆಸಿಐ ಜನ್ನಾಪುರ ಸಮೃದ್ಧಿ ಪದಗ್ರಹಣ ಸಮಾರಂಭ
ಮೂಡಿಗೆರೆ.
ಹನಿಫೀಲ್ಡ್ ಹೋಂ ಸ್ಟೇ ಜೇನುಬೈಲು ಇಲ್ಲಿ ದಿನಾಂಕ 09/01/2022 ರಂದು ಜೆಸಿಐ ಜನ್ನಾಪುರ ಸಮೃದ್ಧಿ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಭಾರತದ ರಾಷ್ಟೀಯ ಉಪಾಧ್ಯಕ್ಷರಾದ ಜೆಸಿ
ಸೆನೆಟರ್ ವಿಕಾಸ್ ಗೂಗ್ಲಿಯ ಮಾಡಿ ಜೆಸಿಐ ಜನ್ನಾಪುರ ಸಮೃದ್ಧಿಯು ಹೊಸ ಹೊಸ ಯುವಕರನ್ನು ಜೆಸಿಐ ಗೆ ಸೇರಿಸಿ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾದ ಜೆಸಿ ಸಂದೀಪ್ ಜೇನುಬೈಲು ರವರಿಗೆ ಪ್ರಮಾಣ ವಚನ ಬೋದಿಸಿ ಗೋಲ್ಡನ್ ಕಾಲರ್ ಪಡೆದ ಮೂರನೇ ಘಟಕ ಇದಾಗಿದೆ ಎಂದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ಸೆನೆಟರ್ ನವೀನ್ ಲಾಯ್ಡ್ ಮಿಸ್ಕಿತ್ ಮಾತನಾಡಿ ಯಾರಲ್ಲಿ ಭರವಸೆ ಮತ್ತು ಆತ್ಮವಿಶ್ವಾಸ ಇರುತ್ತದೆಯೂ ಅವರು ಯಶಸ್ವಿ ಆಗುತ್ತಾರೆoದು ತಿಳಿಸಿದರು. ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ಸುಗಮ ಸಂಗೀತ ಜಿಲ್ಲಾ ಅಧ್ಯಕ್ಷರು ಹಾಗೂ ವಕೀಲರು ಆದ S S ವೆಂಕಟೇಶ್ ಚಿಕ್ಕಮಗಳೂರು ಇವರು ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವದ ಬಗ್ಗೆ ಮಾತನಾಡಿದರು.
ಸಂಸ್ಥಾಪಕ ಅಧ್ಯಕ್ಷರಾದ ಜೆಸಿ ಸಂತೋಷ್ U C ತಮ್ಮ ಒಂದು ವರ್ಷದ ವರದಿಯನ್ನು ಒಪ್ಪಿಸಿ ತಮಗೆ ಸಹಕರಿಸಿದ ಸರ್ವ ಸದಸ್ಯರನ್ನು ಹಾಗೂ ವಲಯ ಮಂಡಳಿ ರವರಿಗೆ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರಾದ ಜೆಸಿ ಪ್ರಜ್ವಲ್,
ಡಾ ಫೈರೋಜ್ ಅಹಮದ್. ಜೆಜೆಸಿ ಅಧ್ಯಕ್ಷಣಿ ಶಿಫಾ ಫಾತಿಮಾ,
ಜೇಸಿರೇಟ್ ಅಧ್ಯಕ್ಷೆ ದೀಪಿಕಾ ಸಂತೂಷ್.
ಎಲ್ಲ ಪಕ್ಷದ ರಾಜಿಕೀಯ ಮುಖಂಡರು.ಸಾರ್ವಜನಿಕರು ಭಾಗವಹಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |