*ಕೆ. ಹೆಚ್. ಗೀತಾ. ರಾಷ್ಟ್ರಪ್ರಶಸ್ತಿ * ಡಿ.ಎಸ್. ಪುಷ್ಪಾವತಿ. ರಾಜ್ಯ ಪ್ರಶಸ್ತಿ
1 min read
ಚಿಕ್ಕಮಗಳೂರು ತಾಲ್ಲೂಕು ಅಲ್ದೂರು ಹೋಬಳಿ ಯಲಗುಡಿಗೆ ಸರ್ಕಾರಿ ಶಾಲೆಗೆ ರಾಷ್ಟ್ರಪ್ರಶಸ್ತಿ, ಇಳೇಖಾನ್ ಸರ್ಕಾರಿ ಶಾಲೆಗೆ ರಾಜ್ಯಪ್ರಶಸ್ತಿ ಭಾಜನ. ಭಾರತದ ಪ್ರಪ್ರಥಮ ಮಹಿಳಾ ಶಾಲಾ ಶಿಕ್ಷಕಿ, ಕ್ರಾಂತಿಕಾರಿ ಹೋರಾಟಗಾರ್ತಿ, ಸತ್ಯಶೋಧನಾ ಸಮಿತಿಯ ರೂವಾರಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯವರ ಹೆಸರಿನಲ್ಲಿ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸೇವೆ ಸಲ್ಲಿಸುವ ಶಿಕ್ಷಕರನ್ನು ಗುರುತಿಸಿ ಗೌರವಿಸಿ ಕೊಡಮಾಡುವ ರಾಷ್ಟ್ರಪ್ರಶಸ್ತಿಗೆ ಯಲಗುಡಿಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಕೆ ಹೆಚ್ ಗೀತಾ ಮತ್ತು ರಾಜ್ಯಪ್ರಶಸ್ತಿಗೆ ಇಳೇಖಾನ್ ಸರ್ಕಾರಿ ಪ್ರಾಥಮಿಕ ಶಾಲೆಯ ಡಿಎಸ್ ಪುಷ್ಪಾವತಿ ಅವರು ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಕ್ರಮವಾಗಿ ಬೆಂಗಳೂರು ಮತ್ತು ಧಾರವಾಡದಲ್ಲಿ ಇಂದು ನಡೆದ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ, ಇವರಿಬ್ಬರ ಸೇವೆ ಇತರೆ ಶಾಲೆಗಳಿಗೆ ಮಾದರಿಯಾಗಲಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಶುಭಾಶಯ ಕೋರಿ ಇಬ್ಬರಿಗೂ ಅಭಿನಂದಿಸುತ್ತದೆ. ಬರಹ ಕೃಪೆ.ಮಂಜುನಾಥ ಸ್ವಾಮಿ.ಜಿಲ್ಲಾ ಕಾರ್ಯದರ್ಶಿ. ಜ್ನಾನ ವಿಜ್ನಾನ ಸಮಿತಿ. ವರದಿ ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.
Good facilities and Best treatment Center Bangalore |
Fresher Jobs | jobs hiring | job openings Udyog mela | jobs employment | udyog kendra – Nisarga Care