*ಕುವೆಂಪು ಜನ್ಮ ದಿನಾಚರಣೆ*
1 min read
ಕುವೆಂಪು ಜನ್ಮ ದಿನಾಚರಣೆ*
ತಾ.ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಕುವೆಂಪುರವರ ಜನ್ಮದಿನೋತ್ಸವವನ್ನು ನಳಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹೇಮಂತ್ ರಾಜ್ ನೆರೆವೇರಿಸಿ,
ಕುವೆಂಪುರವರು ಅದಮ್ಯ ಚೇತನ ಇವರ ಜನ್ಮ ದಿನಾಚರಣೆಯನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸುತ್ತಿರುವುದು ಸೂಕ್ತವಾಗಿದೆ ಶಿಕ್ಷಣ ಇಲಾಖೆ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.
ಇಂದಿನ ಕಾರ್ಯಕ್ರಮದ ಉಪನ್ಯಾಸ ನೀಡಿದಮೂಡಿಗೆರೆ ಸರ್ಕಾರಿ ಜೂನಿಯರ್ ಕಾಲೇಜ್ ನ ಕನ್ನಡ ಶಿಕ್ಷಕರಾದ ಶ್ರೀಯುತ ಹೆಚ್.ವಿ. ತೇಜೋಮೂರ್ತಿ ಅವರು ರಸ ಋಷಿ , ಕಲಾತಪಸ್ವಿ ನುಡಿದಂತೆ ನಡೆದವರು ನಡೆದಂತೆ ಬದುಕಿದವರು ಕುವೆಂಪುರವರು,
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಇವರು ತಮ್ಮ ಕೃತಿಗಳ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದ ಯುಗದ ಕವಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಶಾಂತಕುಮಾರ್ .ಹೆಚ್.ಎಂ . ಇದು ನನ್ನ ಚೊಚ್ಚಲ ಕಾರ್ಯಕ್ರಮ ನಾಡಗೀತೆ ಕರ್ತೃ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕುರಿತ ಈ ಕಾರ್ಯಕ್ರಮ ಸಂತಸ ತಂದಿದೆ,
ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ದಾರಿ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ನಳಂದ ಶಿಕ್ಷಣ ಸಂಸ್ಥೆಯ ಮಾನ್ಯ ಕೃಷ್ಣೇಗೌಡರು
. ಕನ್ನಡ ಸಾಹಿತ್ಯಪರಿಷತ್ ಕಾರ್ಯದರ್ಶಿ ಆರ್ ಪ್ರಕಾಶ್ .
ಜಿಲ್ಲಾ ಪ್ರಧಾನ ಸಂಚಾಲಕರು ಮಗ್ಗಲಮಕ್ಕಿ ಗಣೇಶ್,
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿಮಂಜುನಾಥ್ . ಎಂ,ಎಸ್ ಅಶೋಕ್ .
ನಾರಾಯಣ್ .
ಬಕ್ಕಿ ಪ್ರಸಾದ್.
ಶಾಲ ಮುಖ್ಯಸ್ತ ಗಣೇಶ್, ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.