*ಕಳಸ ಕಸಾಪ ವತಿಯಿಂದ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾಚರಣೆ*
1 min read
*ಕಳಸ ಕಸಾಪ ವತಿಯಿಂದ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾಚರಣೆ*
ಕಳಸದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಪ್ರಾಂಶುಪಾಲರಾದ ಕೆಂಪಸಿದ್ದಯ್ಯ ರವರ ಅಧ್ಯಕ್ಷತೆಯಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಶಿವರಾಂಭಟ್ರವರು ಕುವೆಂಪು ಕುರಿತು ನುಡಿನಮನ ಸಲ್ಲಿಸಿದರು. ಪ.ಪೂ ಕಾಲೇಜು ವಿದ್ಯಾರ್ಥಿಗಳು ಕುವೆಂಪು ಭಾವಗೀತೆಗಳು .ಹಾಡಿ ಗೀತನಮನ ಸಲ್ಲಿಸಿದರು.
ಅ.ರಾ.ರಾದಕ್ರಿಷ್ಣರವರು ಇದ್ದರು.
ಅಧ್ಯಕ್ಷರಾದ ಅ.ರಾ. ಸತೀಶ್ಚಂದ್ರ ರವರು ಓ ನನ್ನ ಚೇತನ! ಹಾಡಿ ಇಂದಿನ ಕುವೆಂಪು ಹಾಗೂ ಸಿ. ಅಶ್ವಥ್ ರವರ ಜನ್ಮದಿನಾಚರಣೆ ಮಹತ್ವವನ್ನು ಕುರಿತು ಮಾತನಾಡಿದರು. ಕಾಲೇಜು ಉಪನ್ಯಾಸಕರೂ ಕಸಾಪ ಸಂಚಾಲಕರೂ ಆಗಿರುವ ಮುಕುಂದಕಿಶೋರ್ ರವರು ಸಭಾಕಾರ್ಯಕ್ರಮವನ್ನು ಮುನ್ನಡೆಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.