*ಗ್ರಾಮೀಣ ತೋಟಗಾರಿಕ ಕಾರ್ಯನುಭವ*
1 min read
*ಗ್ರಾಮೀಣ ತೋಟಗಾರಿಕ ಕಾರ್ಯನುಭವ*
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ. ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ. ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಶಿಬಿರ 2021 – 22ರ ಅಡಿಯಲ್ಲಿ ದಿನಾಂಕ 13/12/21ರಂದು ನಡೆದ “ಬೆಳೆ ವಿಚಾರ ಸಂಕೀರ್ಣ”ವನ್ನು ಬೈರಾಪುರ ಗ್ರಾಮದ ಸಮುದಾಯಭವನದಲ್ಲಿ ನಡೆಸಲಾಯಿತು. ಇದರಲ್ಲಿ ಬಾಳೆ ಕೃಷಿ ಹಾಗೂ ಡ್ರಾಗನ್ ಹಣ್ಣಿನ ಕೃಷಿಯ ಬಗ್ಗೆ ತಿಳಿಸಿಕೊಡಲಾಯಿತು ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ರಾಕೇಶ್ ಜೋಶಿ ಅವರು ಉಪಸ್ಥಿತರಿದ್ದು ಡಾ||ಯಲ್ಲೇಶ್ ಕುಮಾರ್ ವಿಜ್ಞಾನ ವಿಭಾಗ, ಇವರು ಈ ಹಣ್ಣುಗಳ ಬೇಸಾಯ ಕ್ರಮಗಳನ್ನು ವಿವರಿಸಿದರು. ಮೊದಲನೆಯದಾಗಿ ಬಾಳೆ ಕೃಷಿಯ ಬಗ್ಗೆ ಮಾತನಾಡಿದ ಇವರು , ರೈತರಿಗೆ ಬಾಳೆ ಕೃಷಿಯ ಅನುಕೂಲಗಳು, ಬೇಸಾಯ ಕ್ರಮಗಳು, ವಿಭಿನ್ನ ತಳಿಗಳ, ರೋಗ-ಕೀಟ ಬಾದೆಗಳು, ಇಳುವರಿ, ಮಾರುಕಟ್ಟೆಯ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ನಂತರ ಇತ್ತೀಚೆಗೆ ಪ್ರಚಲಿತವಾದ ಡ್ರಾಗನ್ ಹಣ್ಣಿನ ಬಗ್ಗೆಯೂ ಮಾಹಿತಿ ನೀಡಿದ್ದರು, ಈ ಹಣ್ಣಿಗೆ ನೀರಿನ ಅವಶ್ಯಕತೆ ಕಡಿಮೆ ಇದ್ದು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದರು. ಬೈರಾಪುರ ಹಾಗೂ ಸೂರನ ಹಳ್ಳಿಯ ರೈತರು ಈ ಕಾರ್ಯಕ್ರಮದಲ್ಲಿ ನೆರೆದಿದ್ದು, ಬಾಳೆ ಹಾಗೂ
ಡ್ರಾಗನ್ ಹಣ್ಣಿನ ಕೃಷಿಯ ಬಗ್ಗೆ ತಿಳಿದುಕೊಂಡರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ಶಾಂತಿಯುತವಾಗಿ ಎಲ್ಲ ರೈತರು ಮಾಹಿತಿ ತಿಳಿದುಕೊಳ್ಳುವ ಮೂಲಕ ಇದರ ಸದುಪಯೋಗ ಪಡೆದು ಕೊಂಡಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.