*ಡಾ. ಎಚ್.ಎಸ್. ಸತ್ಯನಾರಾಯಣಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ*
1 min read
*ಡಾ. ಎಚ್.ಎಸ್. ಸತ್ಯನಾರಾಯಣಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ*
ಚಿಕ್ಕಮಗಳೂರು.
ಕಳಸಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ಎಚ್.ಎಸ್. ಸತ್ಯನಾರಾಯಣ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪುರಸ್ಕರಿಸಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸಿ ದೊರಕಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣ ತಜ್ಞ ಡಾ. ಹಿರೇಮಲ್ಲೂರು ಈಶ್ವರನ್ ಅವರ ಹೆಸರಿನಲ್ಲಿ ಹಾವೇರಿಯ ಉತ್ತರ ಸಾಹಿತ್ಯ ವೇದಿಕೆಯು ೨೦೨೧ನೇ ವರ್ಷದ ಪ್ರಶಸ್ತಿಗಾಗಿ ಡಾ. ಎಚ್.ಎಸ್. ಸತ್ಯನಾರಾಯಣ ಅವರನ್ನು ಆಯ್ಕೆ ಮಾಡಿ ಗೌರವಿಸಿದೆ.
ಲೇಖಕರು, ಸಾಹಿತ್ಯ ಪರಿಚಾರಕರಾಗಿ ರಾಜ್ಯದಾದ್ಯಂತ ಪರಿಚಿತರಾಗಿರುವ ಹಾಗೂ ಇಪ್ಪತ್ತೈದು ವರ್ಷಗಳ ಕಾಲ ಜನಪ್ರಿಯ ಕನ್ನಡ ಉಪನ್ಯಾಸಕರಾಗಿ ರಾಜ್ಯದ ಹಲವೆಡೆ ಸೇವೆಸಲ್ಲಿಸಿರುವ ಸತ್ಯನಾರಾಯಣ ಅವರು ಪದವಿ ಪೂರ್ವ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ, ಪಿಯುಸಿ ಕನ್ನಡ ಪಠ್ಯ ರಚನಾ ಸಮಿತಿಯ ಸಂಚಾಲಕರಾಗಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಒಂದರಿಂದ ಹತ್ತನೇ ತರಗತಿವರೆಗಿನ ಕನ್ನಡ ಪಠ್ಯ ರಚನಾ ಸಮಿತಿಯ ಉನ್ನತ ಪರಿಶೀಲನಾ ಸನಿತಿಯ ಸದಸ್ಯರಾಗಿ, ಕಸಾಪ ಪರೀಕ್ಷಾ ವಿಭಾಗದ ಸಲಹೆಗಾರರಾಗಿ ಸಲ್ಲಿಸಿರುವ ಉತ್ತಮ ಸೇವೆಯನ್ನು ಪುರಸ್ಕರಿಸಿ ಈ ಪ್ರಶಸಿಗೆ ಆಯ್ಕೆ ಮಾಡಲಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.