लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದೇಶದ ಮೊದಲ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ಮತ್ತು ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

1 min read
Featured Video Play Icon

ದೇಶದ ಮೊದಲ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ಮತ್ತು ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಇಂದು ಕೊಟ್ಟಿಗೆಹಾರದ ಸ್ಪೂರ್ತಿ ಮಿತ್ರ ಮಂಡಳಿಯ ಗ್ರಂಥಾಲಯದಲ್ಲಿ ನೆನ್ನೆ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣವನ್ನಪ್ಪಿದ ಸಿ ಡಿ ಎಸ್ ಮುಖ್ಯಸ್ಥರಾದ ಬಿಪಿನ್ ರಾವತ್ ಹಾಗೂ ರಾವತ್ ರವರ ಪತ್ನಿಯನ್ನೊಳಗೊಂಡಂತೆ 11 ಸೈನಿಕರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕ.ಸಾ.ಪ ಬಣಕಲ್ ಹೋಬಳಿ ಘಟಕ ಹಾಗೂ ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಸೈನಿಕರು ನಮ್ಮ ದೇಶದ ಕಣ್ಣುಗಳು ಅವರನ್ನು ಕಳೆದುಕೊಂಡಿದ್ದು ನಮಗೆ ತುಂಬಲಾರದ ನಷ್ಟವಾಗಿದೆ,12 ಜನ ಸೈನಿಕರೆಂದರೆ ಬರಿಯ ಒಂದು ಸಂಖ್ಯೆಯಲ್ಲ,ಅವರು ನಮ್ಮ ದೇಶದ ಶಕ್ತಿಗಳು ಸೈನಿಕರಿಲ್ಲದಿದ್ದರೆ ನಮಗೆ ನೆಮ್ಮದಿ, ಸುರಕ್ಷತೆಯಿಲ್ಲ. ದೇಶಕ್ಕೆ ರಕ್ಷಣೆ ಇಲ್ಲ, ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿ ಭಗವಂತ ನೀಡಲಿ ಎಂದರು.
ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್ ಮಾತನಾಡಿ ರೈತರು ಮತ್ತು ಸೈನಿಕರು ನಮ್ಮ ದೇಶದ ಎರಡು ಮುತ್ತುಗಳು, ಅದರಲ್ಲಿ ಯಾವುದನ್ನು ಕಳೆದುಕೊಂಡರು ಕೂಡ ನಮಗೆ ಮತ್ತು ನಮ್ಮ ದೇಶಕ್ಕೆ ಅರಗಿಸಿಕೊಳ್ಳಲಾಗದ ನಷ್ಟವಾಗುತ್ತದೆ, ನಮ್ಮ ದೇಶ ಸುರಕ್ಷತೆಯಿಂದ,ನೆಮ್ಮದಿಯಿಂದ ಇರಲು ಮತ್ತು ನಾವುಗಳು ಸುಮಾರು 8 ರಿಂದ ಹತ್ತು ಗಂಟೆಯ ಕಾಲ ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೂ ಕೂಡ ನಮ್ಮ ಸೈನಿಕರೇ ಕಾರಣ. ನೆನ್ನೆ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಿ. ಡಿ. ಎಸ್ ಮುಖ್ಯಸ್ಥರಾದ ಬಿಪಿನ್ ರಾವತ್ ಮತ್ತು 11 ಸೈನಿಕರನ್ನು ಕಳೆದುಕೊಂಡಿದ್ದು ನಮ್ಮ ದೌರ್ಭಾಗ್ಯವೇ ಸರಿ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಣಕಲ್ ಹೋಬಳಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ವಸಂತ್ ಹಾರಗೋಡು ಮಾತನಾಡಿ ಸೈನಿಕರು ನಮ್ಮ ದೇಶದ ಅತ್ಯಮೂಲ್ಯ ಆಸ್ತಿ ಅವರನ್ನು ಕಳೆದುಕೊಂಡಿದ್ದು ನಮ್ಮ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ,ಸೈನಿಕರ ತ್ಯಾಗ ಬಲಿದಾನದಿಂದ ನಾವು ಸುರಕ್ಷಿತವಾಗಿ ನೆಮ್ಮದಿಯಿಂದ ಇರಲು ಸಾಧ್ಯ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿ ಬಗವಂತ ನೀಡಲಿ ಎಂದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ನಂದೀಶ್ ಬಂಕೇನಹಳ್ಳಿ,
ಆನಂದ್ ಕಣಚೂರ್ .ಸ್ಪೂರ್ತಿ ಮಿತ್ರ ಮಂಡಳಿ ಮತ್ತು ಬಣಕಲ್ ವಿದ್ಯಾ ಭಾರತಿ ಶಾಲೆಯ ಶಿಕ್ಷಕರಾದ ಭಕ್ತೇಶ್ ಕೊಟ್ಟಿಗೆಹಾರ,ಸ್ಥಳೀಯ ಮಿಮಿಕ್ರಿ ಕಲಾವಿದ ಸಿದ್ದಿಕ್,ಸ್ಥಳೀಯರಾದ ಶಂಕರ್ ಟೈಲರ್, ರವೂಫ್, ಮಾಸ್ಟರ್ ಅರ್ಜುನ್ ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಬರಹ ಕೃಪೆ: ವಸಂತ್ ಹಾರ್ ಗೋಡು.

ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿ.ವಿ

Career | job

Navachaitanya Old Age Home

About Author