लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಗುರುತಿಸುವಿಕೆ** ಸೇವಾ ರತ್ನ ಪ್ರಶಸ್ತಿ

1 min read
Featured Video Play Icon

*ಗುರುತಿಸುವಿಕೆ*

ಉಡುಪಿಯ ಪ್ರತಿಷ್ಠಿತ ಸಂಸ್ಥೆಯಾದ
ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿವರ್ಷ ಮಹಾಸಭೆಯ ದಿನ ಸಮಾಜ ಸೇವಕರನ್ನು ಗುರುತಿಸಿ ಅರ್ಹ ವ್ಯಕ್ತಿಗಳಿಗೆ ಏನ ನೀಡುವ ಸೇವಾ ರತ್ನ ಪ್ರಶಸ್ತಿಯನ್ನು ಈ ವರುಷ ಮುಳುಗು ತಜ್ಞ ಜೀವರಕ್ಷಕ ಆಪದ್ಬಾಂಧವ ಎಂದು ಜನರನ್ನು ಜನರಿಂದ ಕರೆಯಲ್ಪಡುವ ಈಶ್ವರ್ ಮಲ್ಪೆ ಬಲ ರಾಮನಗರ ಇವರಿಗೆ 2021 ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸುತಿರುತ್ತಾರೆ.
ಈಶ್ವರ್ ಮಲ್ಪೆಯವರು ನೋವಿನಲ್ಲಿ ಕೈ ತೊಳೆಯುತ್ತಾ ಇದ್ದರೂ ಕೂಡ ಹಗಲು ರಾತ್ರಿ ಅನ್ನದೇ 24ಘಂಟೆ ಜನಸೇವೆಯಲ್ಲಿದ್ದು, ಇಷ್ಟರತನಕ 235 ಮೃತ ದೇಹಗಳನ್ನು ಹರಿಯುವ ನದಿ ಮತ್ತು 38ಅಡಿ ಅಳದ ಸಮುದ್ರದಲ್ಲಿ ಹೂತಿರುವ ಹೆಣಗಳನ್ನು ಸಾಹಸ ಮರೆದು ಶೋಧಿಸಿ ವಾರಸುದಾರಾರಿಗೆ ಅರ್ಪಿಸುವಲ್ಲಿ ಇವರ ನಿಸ್ವಾರ್ಥ ಸೇವೆ ಗಮನೀಯ ವಾದದ್ದು.
ಈಶ್ವರ್ ಮಲ್ಪೆ ವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಇಂದು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಧ್ಯಕ್ಷರಾದ ವಾಲ್ಟರ್ ಸಾಲ್ದಿನ, ಉಪಾಧ್ಯಕ್ಷರಾದ ದಿವಾಕರ್ ಸನಿಲ್, ಸಂಸ್ಥಾಪಕ ಅಧ್ಯಕ್ಷರಾದ ಡಾಲ್ಫಿ ವಿಕ್ಟರ್ ಲೂಯಿಸ್. ಕಾರ್ಯದರ್ಶಿ ಆನಂದ ಕಾರ್ನಾಡ್ ಕೋಶಾಧಿಕಾರಿ ಮ್ಯಾಕ್ಸಿನ್ ಸಾಲ್ದಿನ ಉಪಸ್ಥಿತರಿದ್ದು ಸಂಸ್ಥೆಯ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಗೌರವಪೂರ್ಣವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬರಹ ಕೃಪೆ.
ಈಶ್ವರ್ ಸಿ ನಾವುಂದ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ.

http://nisargacare.com/navachaithanya-old-age-home/

 

http://nisargacare.com/career/

About Author