लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿದ್ಯಾಭಾರತಿ ಶಾಲೆ ಬಣಕಲ್ ನಲ್ಲಿ ವಿಜೃಂಭಣೆಯಿಂದ ನಡೆದ ಮಕ್ಕಳ ದಿನಾಚರಣೆ ಹಾಗೂ ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮ

1 min read

ವಿದ್ಯಾಭಾರತಿ ಶಾಲೆ ಬಣಕಲ್ ನಲ್ಲಿ ವಿಜೃಂಭಣೆಯಿಂದ ನಡೆದ ಮಕ್ಕಳ ದಿನಾಚರಣೆ ಹಾಗೂ ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮ
ದಿನಾಂಕ:20:11:2021ನೇ ಶನಿವಾರದಂದು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ(ರಿ).ಬಣಕಲ್ ನಲ್ಲಿ ಮಕ್ಕಳ ದಿನಾಚರಣೆ ಹಾಗೂ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಬಹಳ ಸುಂದರ ಹಾಗೂ ವಿಜೃಂಭಣೆಯಿಂದ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾರ್ಥಿ ಮಂತ್ರಿಮಂಡಲದ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿ ,ಮಾತನಾಡಿದ ಶಿಕ್ಷಕ ವಸಂತ್, ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಈ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯು ಕೂಡ ಪ್ರಜಾಪ್ರಭುತ್ವದ ಉದ್ದೇಶ ಹಾಗೂ ವ್ಯಾಪ್ತಿಯನ್ನು ಅರಿಯುವುದು ಅನಿವಾರ್ಯ ಮತ್ತು ಅವಶ್ಯಕ ಆದ್ದರಿಂದ ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ಜೊತೆಗೆ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯ ಅರಿವು ಮೂಡಿಸಲು ಹಾಗೂ ಮತದಾರರು ಮತ್ತು ಜನಪ್ರತಿನಿಧಿಗಳ ಜವಾಬ್ದಾರಿ ಏನು ಎಂಬುದನ್ನು ಮಕ್ಕಳಿಗೆ ತಿಳಿಸಲು ಪ್ರತಿ ವರ್ಷದಂತೆ ವಿದ್ಯಾರ್ಥಿ ಮಂತ್ರಿಮಂಡಲದ ರಚನೆ ಮಾಡಲಾಗಿದೆ ಎಂದರು .
ಪ್ರಧಾನಮಂತ್ರಿ-ಭುವನ್. ಸಾಂಸ್ಕೃತಿಕ ಮಂತ್ರಿ- ಭಾಗ್ಯಶ್ರೀ
ಶಿಕ್ಷಣ ಮಂತ್ರಿ- ಕಾರ್ತಿಕ್
ಆಹಾರ ಮಂತ್ರಿ- ಮಾನವಿ.ಬಿ.ಸಿ
ಸ್ವಚ್ಚತೆ ಮತ್ತು ನೈರ್ಮಲ್ಯ ಮಂತ್ರಿ-ಜಿಷ್ಣು.ಬಿ.ಎಲ್
ಕಾನೂನು ಮತ್ತು ಶಿಸ್ತು ಮಂತ್ರಿ-ಸನ್ಮಿತ.ಬಿ.ಬಿ
ಕ್ರೀಡಾಮಂತ್ರಿ-ಉಜ್ವಲ್
ವಾರ್ತಾ ಮತ್ತು ಪ್ರಸಾರ ಮಂತ್ರಿ- ಅನ್ವಿತ. ಇವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ನಂತರ ನಡೆದ ಮಕ್ಕಳ ದಿನಾಚರಣೆಯ ಕಾರ್ಯಕ್ರಮದ ಅತಿಥಿಗಳಾಗಿ ವಿದ್ಯಾರ್ಥಿ ಮಂತ್ರಿಮಂಡಲದ ನೂತನ ಸಚಿವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಜೊತೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವರಾಂ ಶೆಟ್ಟಿ. ಉಪಾಧ್ಯಕ್ಷರಾದ ಸುಬ್ರಾಯಗೌಡ. ಕಾರ್ಯದರ್ಶಿ ಲಿಂಗಪ್ಪ. ಖಜಾಂಚಿ ರಾಮಚಂದ್ರ ಹೊಳ್ಳ. ಮುಖ್ಯ ಶಿಕ್ಷಕರಾದ ಮಾಲತಿ ಮತ್ತು ನಾಗರಾಜು ಹಾಗೂ ಶಿಕ್ಷಕರು ಉಪಸ್ಥಿಯೊಂದಿಗೆ ಕಾರ್ಯಕ್ರಮ ನಡೆಯಿತು.
ಮಕ್ಕಳ ದಿನಾಚರಣೆಯ ಪ್ರಾಸ್ತಾವಿಕ ನುಡಿಯನ್ನು ಶಿಕ್ಷಕರಾದ ಭಕ್ತೇಶ್ ಮಾತನಾಡಿ ನೆಹರೂರವರ ತತ್ವ ಆದರ್ಶಗಳು ಇಂದಿಗೂ ಜೀವಂತವಾಗಿದ್ದು ಅವರ ಮಕ್ಕಳ ಮೇಲಿನ ಅಪಾರ ಪ್ರೀತಿ ಇಂದು ಅವರ ಜನ್ಮದಿನಾಚರಣೆ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಮಾಲತಿ.ಟಿ.ಆರ್. ಮಾತನಾಡಿ ಎಲ್ಲಾ ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಶಿಕ್ಷಣದ ಜೊತೆಗೆ ಆದರ್ಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣದ ಗುರಿಯನ್ನು ಹೊಂದಬೇಕು ಎಂದರು.
ಶಾಲಾ ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಂ ಶೆಟ್ಟಿ ಮಾತನಾಡಿ ಮಕ್ಕಳ ದಿನಾಚರಣೆಯ ಜೊತೆಗೆ ಶಾಲಾಮಂತ್ರಿಮಂಡಲದ ಉದ್ಘಾಟನೆ ಮಾಡುತ್ತಿರುವುದು ಒಂದು ಅರ್ಥಪೂರ್ಣ ಕಾರ್ಯಕ್ರಮ ಏಕೆಂದರೆ ಭಾರತದ ಪ್ರಜಾಪ್ರಭುತ್ವಕ್ಕೆ ನೆಹರೂರವರ ಕೊಡುಗೆ ಅಪಾರ ಈ ನಿಟ್ಟಿನಲ್ಲಿ ಅವರ ಜನ್ಮದಿನಾಚರಣೆಯ ಜೊತೆ ವಿದ್ಯಾರ್ಥಿ ಮಂತ್ರಿಮಂಡಲದ ಸಚಿವರು ಅಧಿಕಾರ ಪಡೆದು ಶಾಲಾ ಮಟ್ಟದಿಂದಲೇ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳಲು ಇದೊಂದು ಸದಾವಕಾಶ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂತ್ರಿಮಂಡಲದ ವಿದ್ಯಾರ್ಥಿ ನಾಯಕ ಭುವನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆ ಹಾಗೂ ಆದರ್ಶ ಓದು ಮತ್ತು ಆದರ್ಶಬರವಣಿಗೆಯ ಸಪ್ತಾಹದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮತ್ತು ಶಾಲಾ ಶಿಕ್ಷಕ ಶಿಕ್ಷಕಿಯರು ವಿವಿಧ ಮನೋರಂಜನ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ರಂಜಿಸಿದರು.

ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೊ ನ್ಯೂಸ್.

Career | job

Navachaitanya Old Age Home

About Author