ಸರಕಾರಿ ಪಾಠಶಾಲೆ ಆವರಣದಲ್ಲಿ ಕುಡಿಯುವ ನೀರಿನ ಸ್ವಚ್ಛತೆ ನಡೆಸಿದ ಕಸಬ ವಲಯದ ಸ್ವಯಂಸೇವಕರು
1 min read
ಮೂಡಿಗೆರೆ ತಾಲ್ಲೂಕಿನ ದುಂಡುಗ ಸರಕಾರಿ ಪಾಠಶಾಲೆ ಆವರಣದಲ್ಲಿ ಕುಡಿಯುವ ನೀರಿನ ಸ್ವಚ್ಛತೆ ನಡೆಸಿದ ಕಸಬ ವಲಯದ ಸ್ವಯಂಸೇವಕರು
ಮೂಡಿಗೆರೆ ಕಸಬಾ ವಲಯ
ಅಕ್ಟೋಬರ್ 23
ಕಳೆದ ಎರಡು ವರ್ಷಗಳಿಂದ ಶಾಲೆಯನ್ನು ಮುಚ್ಚಿರುವುದರಿಂದ ಶಾಲೆಯ ಮಕ್ಕಳು ಬಳಸಬೇಕಾದ ನೀರಿನ ಟ್ಯಾಂಕ್ ಕೊಳೆಯಿಂದ ತುಂಬಿದ್ದು ಅದನ್ನು ಶಾಲೆಯ ಮುಖ್ಯೋಪಾಧ್ಯಾಯರ ಮನವಿಗೆ ಸ್ಪಂದಿಸಿ ಈ ದಿನ ಸ್ವಚ್ಛತೆ ಗೊಳಿಸಲಾಯಿತು.
ಬೆಳಗ್ಗೆ 10 ಗಂಟೆಯಿಂದ ಪ್ರಾರಂಭವಾದ ಕೆಲಸವು ನೀರಿನ ಟ್ಯಾಂಕಿನ ಒಳಭಾಗ ಹಾಗೂ ಹೊರಭಾಗದಲ್ಲಿ ಸ್ವಚ್ಛತೆ ಗೊಳಿಸಿ ಥ್ಯಾಂಕ್ಯೂ ಸುತ್ತ ಬೆಳೆದಿದ್ದ ಗಿಡಗಳನ್ನು ತೆರವುಗೊಳಿಸಲಾಯಿತು.
ಟ್ಯಾಂಕನ್ನು ಸ್ವಚ್ಛಗೊಳಿಸಲು ನೀರಿಲ್ಲದ ಕಾರಣ ಸುಮಾರು ಅರ್ಧ ಕಿಲೋಮೀಟರ್ ನಷ್ಟು ನಡೆದು ನೀರನ್ನು ತಂದು ಸ್ವಚ್ಛಗೊಳಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಸಂಯೋಜಕರಾದ ಪ್ರವೀಣ್ ಪೂಜಾರಿ. ಶಶಿ ಕೆಲ್ಲೂರು.
ಹರೀಶ್ ಗೌಡ.
ಮಂಜುನಾಥ್ ಪೆಟ್ರೋಲ್ ಬಂಕ್ .
ಅಶ್ವಿನ್ ಮಾಕೊನಹಳ್ಳಿ,
ಉಮೇಶ್ ಲೋಕವಳ್ಳಿ ಶಾಲೆ. ಮುಖ್ಯ ಶಿಕ್ಷಕರಾದ ಸುಜಾತ ಸಿಬ್ಬಂದಿ ವರ್ಗದವರಾದ ದಾಕ್ಷಾಯಿಣಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸುಜಾತಾ ಮಾತನಾಡಿ ಕಳೆದ ಎರಡು ವರ್ಷಗಳಿಂದ ನೀರಿನ ಟ್ಯಾಂಕ್ ಸ್ವಚ್ಛತೆ ಆಗದಿರುವುದು ಮನಗಂಡು ಕಳೆದ ಒಂದು ತಿಂಗಳ ಹಿಂದೆ ಶಾಲೆ ಆವರಣವನ್ನು ಸ್ವಚ್ಛ ಮಾಡಿದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಹಾಗೂ ಈ ದಿನ ನೀರಿನಟ್ಯಾಂಕ್ ಸ್ವಚ್ಛತೆ ಗೊಳಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.