*ಅಭಿನಂದನಾ ಕಾರ್ಯಕ್ರಮ*
1 min read
*ಅಭಿನಂದನಾ ಕಾರ್ಯಕ್ರಮ*
ಬಣಕಲ್ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷರಾದ ಅಭಿಲಾಷ್ ಅತ್ತಿಗೆರೆ ಯವರಿಗೆ ಕೊಟ್ಟಿಗೆಹಾರದ ಸ್ಫೂರ್ತಿ ಮಿತ್ರ ಮಂಡಳಿ ಅಧ್ಯಯನ ಕೇಂದ್ರದ ಸದಸ್ಯರು ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಸದಸ್ಯರಿಂದ…ಈ ಕಾರ್ಯಕ್ರಮದಲ್ಲಿ ಕ.ಸಾ.ದ.ಮಾಜಿ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್, ಜೈಪಾಲ್ ಬಿನ್ನಡಿ, ಭಕ್ತೇಶ್ ಕೊಟ್ಟಿಗೆಹಾರ, ಅವಿನಾಶ್ ತರುವೆ, ಪ್ರದೀಪ್ ಬಿನ್ನಡಿ, ಕಿಶೋರ್, ಪಿ.ಕೆ. ಮಂಜುನಾಥ್, ಮಂಜುನಾಥ್ ಬಕ್ಕಿ, ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಗ್ಗಲಮಕ್ಕಿ ಗಣೇಶ್ ಅವ್ರು ಸಹಕಾರಿ ಬ್ಯಾಂಕ್ ನಲ್ಲಿ ಅನೇಕ ಸೌಲಭ್ಯಗಳು ಕೃಷಿಕರಿಗೆ ದೊರಕುವಂತೆ ಮಾಡಿ ರೈತರ ಕಷ್ಟಗಳಿಗೆ ಸ್ಪಂದಿಸುವಂತೆ ಕಾರ್ಯನಿರ್ವಹಿಸಲಿ ಎಂದು ಅಧ್ಯಕ್ಷರಿಗೆ ಸಲಹೆ ನೀಡುವ ಮೂಲಕ ಶುಭಕೋರಿದರು. ಜೈಪಾಲ್ ಬಿನ್ನಡಿ ಮಾತನಾಡಿ ಬಣಕಲ್ ನ ಈ ಬ್ಯಾಂಕ್ ಹಲವಾರು ಯೋಜನೆಗಳಿಂದ ರೈತರಿಗೆ ನೆರವಾಗಿದೆ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೃಷಿಗೆ ಸಹಕಾರ ನೀಡಲಿ ಎಂದು ಹೇಳಿ ಶುಭಕೋರಿದರು ಹಾಗೂ ಅಧ್ಯಕ್ಷರಾದ ಅಭಿಲಾಷ್ ಮಾತನಾಡಿ ಹಲವಾರು ಕಾರ್ಯಕ್ರಮಗಳು ಈಗಾಗಲೇ ಜಾರಿಗೆ ತಂದಿದ್ದೇವೆ ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಇನ್ನೂ ಹೆಚ್ಚು ಆಸಕ್ತಿಯಿಂದ ಬ್ಯಾಂಕ್ ಅನ್ನು ಉತ್ತಮ ದರ್ಜೆಗೇರಿಸಲು ಶ್ರಮವಹಿಸುತ್ತೇನೆ ಎಂದು ಮಾತನಾಡಿದರು.
ಬರಹ ಕೃಪೆ.
ಬಕ್ತೆಶ್.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.