*ಅವಿನ್ ಸ್ವರಸಂಗಮ-ಬಾಳಯಾನಕ್ಕೆ ಗಾನಹಿಮ್ಮೇಳ ಕಾರ್ಯಕ್ರಮದ ಹೊಸ ಫೇಸ್ ಬುಕ್ ಲೈವ್ ಪೇಜ್ ಲೋಕಾರ್ಪಣೆ*
1 min read
*ಅವಿನ್ ಸ್ವರಸಂಗಮ-ಬಾಳಯಾನಕ್ಕೆ ಗಾನಹಿಮ್ಮೇಳ ಕಾರ್ಯಕ್ರಮದ ಹೊಸ ಫೇಸ್ ಬುಕ್ ಲೈವ್ ಪೇಜ್ ಲೋಕಾರ್ಪಣೆ*
ದಿನಾಂಕ : 16 : 10 : 2021ನೇ ಶನಿವಾರದಂದು ಮಾಜಿ ಸಚಿವರು ಮತ್ತು ಸಾಂಸ್ಕೃತಿಕ ರಾಯಭಾರಿಯಾದ ಶ್ರೀಮತಿ ಡಾ.ಮೊಟಮ್ಮನವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೋಟಮ್ಮನವರು ಅದೆಷ್ಟೋ ಗ್ರಾಮೀಣ ಎಲೆಮರೆಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಇಂಥಹ ವೇದಿಕೆಗಳು ಸೃಷ್ಠಿಯಾಗಬೇಕಾಗಿದೆ. ಇಂಥಹ ಪ್ರಯತ್ನಕ್ಕೆ ನಾಂದಿಯಾಗಿರುವ ಅವಿನ್ ಟಿ.ವಿ ಬಳಗಕ್ಕೆ ಧನ್ಯವಾದಗಳನ್ನು ತಿಳಿಸುತ್ತ ಕೆಲವು ಜಾನಪದ ಗೀತೆಗಳನ್ನು ಹಾಡುವ ಮೂಲಕ ವೀಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಗಾಯಕರು ಹಾಗೂ ನಿರ್ದೇಶಕರಾದ ಎಂ.ಎಸ್.ಆನಂದ್. ಬಕ್ಕಿ ಮಂಜುನಾಥ್. ಗಾಯಕರಾದ ಸುಚಿತ್ರ ಪ್ರಸನ್ನ. ಅಂಬಾವತಿ ಶೆಟ್ಟಿ ವಿವಿಧ ಹಾಡಿನ ಮೂಲಕ ವೀಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದ ನಿರ್ದೇಶಕರುಗಳಾದ ಮಗ್ಗಲಮಕ್ಕಿ ಗಣೇಶ್. ಪಿ.ಕೆ.ಮಂಜುನಾಥ್. ನಂದೀಶ್ ಬಂಕೇನಹಳ್ಳಿ. ವೆಂಕಟೇಶ್ ಹೆಸ್ಗಲ್. ವಸಂತ್ ಹಾರ್ಗೋಡು. ಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷರಾದ ಎಂ.ಬಿ.ಗೋಪಾಲ್ ಗೌಡ. ಮಲ್ನಾಡು ಗಲ್ಫ್ ಅಸೋಸಿಯೇಷನ್ ಅಧ್ಯಕ್ಷರಾದ ಹಮೀದ್ ಸಬ್ಬೇನಹಳ್ಳಿ. ಪ್ರಸನ್ನ ಗೌಡಹಳ್ಳಿ. ನಿವೃತ್ತ ಶಿಕ್ಷಕರಾದ ಯುವರಾಜ್. ಟೈಲರ್ ನರಸಿಂಹ. ಶಿಕ್ಷಕ ಭಕ್ತೇಶ್. ಗಾಯಕರಾದ ಜಯಪಾಲ್. ರವಿಬಕ್ಕಿ. ನವೀನ್. ಅವಿನ್ ಟಿ.ವಿ.ನಿರೂಪಕಿ ವಿಜಯಲಕ್ಷ್ಮಿ. ಮಿಮಿಕ್ರಿ ಕಲಾವಿದ ಸಿದ್ಧಿಕ್. ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಟಿ.ವಿ ದಾನಿಗಳಾದ ರವಿ ರೈ ಕಳಸ. ಪ್ರಗತಿ ಸೇವಾಸಂಸ್ಥೆ ಮೂಡಿಗೆರೆ. ಮಂಚೇಗೌಡ ಮೂಡಿಗೆರೆ. ಹಾಗೂ ಲಯನ್ಸ್ ವಲಯ ಅಧ್ಯಕ್ಷರಾದ ಎಂ.ಬಿ.ಗೋಪಾಲಗೌಡ ಅವಿನ್ ಸ್ವರಸಂಗಮಕ್ಕೆ ಸಂಪೂರ್ಣ ಸಹಕಾರವನ್ನು ನೀಡುವ ಮೂಲಕ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮತ್ತಷ್ಟು ಏಳಿಗೆ ಸಾಧಿಸಲು ಶುಭಕೋರಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ನ್ಯೂಸ್ ಬ್ಯೂರೊ ಅವಿನ್ ಟಿ.ವಿ.