ಯುಗಾದಿ ಹಬ್ಬ ದಂದು ಬೇವು -ಬೆಲ್ಲ ತಿನ್ನುವ ಆಚರಣೆ ಒಂದು ವಿಶಿಷ್ಟ ಪರಿಕಲ್ಪನೆ :ಡಾ.ಮೋಹನ್ ರಾಜಣ್ಣ #avintvcom
1 min read
ಮೂಡಿಗೆರೆ :ಬೇವು -ಬೆಲ್ಲ ತಿನ್ನುವ ಆಚರಣೆ ಒಂದು ವಿಶಿಷ್ಟ ಪರಿಕಲ್ಪನೆ :ಡಾ.ಮೋಹನ್ ರಾಜಣ್ಣ. —————————————- ಮೂಡಿಗೆರೆ :ಯುಗಾದಿ ಹಬ್ಬ ದಂದು ಬೇವು -ಬೆಲ್ಲ ತಿನ್ನುವ ಆಚರಣೆಯ ಒಂದು ವಿಶಿಷ್ಟ ಪರಿಕಲ್ಪನೆ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಸಂಸ್ಥಾಪಕ ರಾದ ಡಾ.ಮೋಹನ್ ರಾಜಣ್ಣ ಹೇಳಿದರು. ಅವರು ಇಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಯವರು ಜಿ ಹೊಸಳ್ಳಿ ಗ್ರಾಮದ. ಹೆಚ್. ಕೆ . ರಾಜೇಗೌಡ ರವರ ಮನೆ ಯ ಮುಂಭಾಗದ ಆವರಣ ದಲ್ಲಿ “ಯುಗಾದಿ ಸಂಭ್ರಮ-2021 “ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡಿದರು. ಸಿಹಿ -ಕಹಿ, ಸುಖ -ಕಷ್ಟ. ನಲಿವು -ನೋವು. ಎಂಬ ಮಾತಿನಂತೆ ಜೀವನ ದಲ್ಲಿ ಇವೆರಡರ ಸಮಾನ ಇರುವಿಕೆ ಅಗತ್ಯ ವಾಗಿದೆ ಆಗ ಮಾತ್ರ ಜೀವನ ಸುಗಮ ವಾಗಿ ಸಾಗಲು ಸಾಧ್ಯ ವಿದೆ ಆದರೆ ಕಷ್ಟ ಕ್ಕಿಂತ ಸುಖವೇ ಬೇಕು ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿ ಯಲ್ಲಿ ಕಷ್ಟವನ್ನು ಕಹಿ ಯನ್ನು ನೋವನ್ನು ಬಯಸುವವರೇ ಇಲ್ಲಾ ವೆನ್ನ ವಂತಾಗಿದೆ ಆದರೆ ಜೀವನ ಎನ್ನುವುದು ಕಷ್ಟ-ಸುಖ ಗಳ ಸಂಯೋಜನೆ ಯಾಗಿದೆ ಹಾಗಾಗಿ ಇವೆರಡು ಒಂದನ್ನೊಂದು ಬಿಟ್ಟಿರಲಾರವು ಎಂದು ಹೇಳಿದರು. .ಹಾಗೂ ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬೇವು ಬೆಲ್ಲ ಅರೋಗ್ಯ ಕ್ಕೆ ರಾಮಬಾಣ. ಮಾತ್ರ ವಲ್ಲದೆ ಜೀವನ ದಲ್ಲಿ ಕಷ್ಟ -ಸುಖ ಸಮನಾಗಿ ಹಂಚಿ ಕೊಂಡು ಸಾಗುವ ಸಲಹೆ ನೀಡಿದರು. ಪ್ರಗತಿಪರಆದರ್ಶರೈತ ರಾದ ಶ್ರೀ ಹೆಚ್. ಕೆ. ಪೂರ್ಣೇಶ್ ಮಾತನಾಡುತ್ತಾ ಹೊಸ ವರ್ಷ ಶುಭ ಸಂಕಲ್ಪ ಮಾಡಲು ಪ್ರೇರಣೆ ನೀಡುತ್ತದೆ. ಬಾಳಿನಲ್ಲಿ ಹೊಸತನ ಪಡೆಯಲು ಇದೊಂದು ಸುವರ್ಣ ಅವಕಾಶ ವಾಗಿದೆ ಹೊಸ ಪ್ರಯತ್ನದ ಅನ್ವೇಷಣೆಯೇ ಪ್ರತಿಯೊಬ್ಬರ ಗುರಿಯಾಗಬೇಕುಎಂದರು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಸ್ತ್ರೀಶಕ್ತಿ ಸಂಘ ದ ಸದಸ್ಯ ರಾದ ಶ್ರೀಮತಿ ಸುಗುಣ ರವಿ ನೆರವೇರಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯ ರಾದ ಚಂದ್ರಶೇಖರ . ಕಾರ್ಯದರ್ಶಿ.ಹೆಚ್. ಆರ್. ಯೋಗೇಶ್ ಕುಮಾರ್. ಬಾಲಕೃಷ್ಣ. ರಂಜಿತ್ ಮಾತನಾಡಿದರು . ಮದು. ರಾಜೇಗೌಡ.ಹಾಗೂ ಮುಂತಾ ದವರುಉಪಸ್ಥಿತರಿದ್ದರು . ಬೇವು ಬೆಲ್ಲ ವಿತರಿಸಿದರು ಸಾಂಸ್ಕೃತಿಕ ಕಾರ್ಯಕ್ರಮ *ನೆಡೆಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.