लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಸ್ತೆಗೆ ಅಡ್ಡ ಬಂದ ಕರುವೊಂದನ್ನು ಉಳಿಸಲು ಹೋಗಿ ಕಾರೊಂದು ಬಿದ್ದು ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡ ಘಟನೆ

1 min read

ಕರುವನ್ನು ತಪ್ಪಿಸಲು‌ ಹೊಂಡಕ್ಕೆ ಬಿದ್ದ ಕಾರು

ರಸ್ತೆಗೆ ಅಡ್ಡ ಬಂದ ಕರುವೊಂದನ್ನು ಉಳಿಸಲು ಹೋಗಿ ಕಾರೊಂದು ಹೊಂಡಕ್ಕೆ‌ ಬಿದ್ದು ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡ ಘಟನೆ ಬಣಕಲ್ ಸಮೀಪದ‌ ಹೆಬ್ಬರಿಗೆಯಲ್ಲಿ‌ ನಡೆದಿದೆ.
ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗದ ಕೃಷ್ಣಮೂರ್ತಿ ಹಾಗೂ ವೀಣಾ ಅವರು ತಮ್ಮ ಮಗನ ಮೂರನೇ ವರ್ಷದ ಕಾರ್ಯಕ್ಕೆಂದು ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಬಣಕಲ್ ಸಮೀಪದ ಹೆಬ್ಬರಿಗೆ ಎಂಬಲ್ಲಿ‌ ರಸ್ತೆಗೆ ಅಡ್ಡ ಬಂದ ಕರುವನ್ನು ತಪ್ಪಿಸಲು ‌ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ‌ ಉರುಳಿದೆ. ಉರುಳಿದ ರಭಸಕ್ಕೆ‌ಕಾರು ನಜ್ಜುಗುಜ್ಜಾಗಿದ್ದು ಕರು ಸ್ಥಳದಲ್ಲೆ ಮೃತಪಟ್ಟಿದೆ‌. ಕಾರಿನಲ್ಲಿದ್ದ ಕೃಷ್ಣಮೂರ್ತಿ ಹಾಗೂ ವೀಣಾ ಅವರು ಗಂಭೀರವಾಗಿ ಗಾಯಗೊಂಡಿದ್ದು ಅಂಬುಲೆನ್ಸ್ ಚಾಲಕರಾದ ಬಣಕಲ್ ಆರೀಪ್ ಅವರು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಕರೆದ್ಯೊಯ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ‌.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author