ಕೃಷಿ ರೈತರೊಬ್ಬರು ಸಾಲ ತೀರಿಸಲಾಗದೇ ನೇಣು ಬಿಗಿದು ಆತ್ಮಹತ್ಯೆ#avintvcom
1 min read
ನಿಧನ ವಾರ್ತೆ…… ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಬಾಳೂರಿನ ಕೃಷಿ ರೈತರೊಬ್ಬರು ಸಾಲ ತೀರಿಸಲಾಗದೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಬಾಳೂರಿನ ಬಿ.ಸಿ.ತಿಲಕ್(61) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಧೈವಿ. ಬಾಳೂರು ಗ್ರಾಮದಲ್ಲಿ ತಿಲಕ್ ಅವರಿಗೆ 5 ಎಕರೆ, ಪತ್ನಿಯ ಹೆಸರಿನಲ್ಲಿ 5 ಎಕರೆ ಹಾಗೂ ಮಗಳ ಹೆಸರಲ್ಲಿ 4 ಎಕರೆ 27 ಗುಂಟೆ ಜಮೀನು ಹೊಂದಿದ್ದು ಈ ಜಮೀನಲ್ಲಿ ತಿಲಕ್ ಅವರೇ ಕೃಷಿ ಮಾಡಿಕೊಂಡಿದ್ದರು. ಈ ಜಮೀನಿನಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ ಕೃಷಿ ಮಾಡಿಕೊಂಡಿದ್ದರು. ಕೃಷಿಗಾಗಿ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೂ 3 ಲಕ್ಷ, ಪತ್ನಿ ಎಚ್.ಎ.ಆಶಾ ಅವರ ಹೆಸರಿನಲ್ಲಿ ರೂ2.5 ಲಕ್ಷ, ಮಗಳು ತಪಸ್ಯ ಅವರ ಹೆಸರಿನಲ್ಲಿ ರೂ 2.5 ಲಕ್ಷ ಮತ್ತು ಕೊಟ್ಟಿಗೆಹಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ 50 ಸಾವಿರ ಸಾಲ ಪಡೆದು ಕೃಷಿ ಮಾಡಿದ್ದರು. ಆದರೆ ಕಳೆದ ಎರಡು ವರ್ಷದಿಂದ ವಿಪರೀತ ಮಳೆಯಿಂದ ಅತಿವೃಷ್ಠಿಯಾಗಿ ಬೆಳೆ ಹಾನಿಯಾಗಿದ್ದು ಯಾವುದೇ ಫಸಲು ಕೈಗೆ ಸಿಗದೇ ಬ್ಯಾಂಕ್ ಸಾಲ ತೀರಿಸಲಾಗದೇ ಮನನೊಂದು ಶುಕ್ರವಾರ ಬೆಳಗ್ಗೆ ಮನೆಯ ಬಳಿ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಎಚ್.ಎ.ಆಶಾ ಬಾಳೂರು ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತ ನಿಧನಕ್ಕೆ ಸಂತಾಪ ಕೃಷಿ ರೈತರಾದ ಬಿ.ಸಿ.ತಿಲಕ್ ಅವರ ನಿಧನಕ್ಕೆ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಹಾಗೂ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.