लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೃಷಿ ರೈತರೊಬ್ಬರು ಸಾಲ ತೀರಿಸಲಾಗದೇ ನೇಣು ಬಿಗಿದು ಆತ್ಮಹತ್ಯೆ#avintvcom

1 min read
Featured Video Play Icon

ನಿಧನ ವಾರ್ತೆ…… ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಬಾಳೂರಿನ ಕೃಷಿ ರೈತರೊಬ್ಬರು ಸಾಲ ತೀರಿಸಲಾಗದೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಬಾಳೂರಿನ ಬಿ.ಸಿ.ತಿಲಕ್(61) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಧೈವಿ. ಬಾಳೂರು ಗ್ರಾಮದಲ್ಲಿ ತಿಲಕ್ ಅವರಿಗೆ 5 ಎಕರೆ, ಪತ್ನಿಯ ಹೆಸರಿನಲ್ಲಿ 5 ಎಕರೆ ಹಾಗೂ ಮಗಳ ಹೆಸರಲ್ಲಿ 4 ಎಕರೆ 27 ಗುಂಟೆ ಜಮೀನು ಹೊಂದಿದ್ದು ಈ ಜಮೀನಲ್ಲಿ ತಿಲಕ್ ಅವರೇ ಕೃಷಿ ಮಾಡಿಕೊಂಡಿದ್ದರು. ಈ ಜಮೀನಿನಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ ಕೃಷಿ ಮಾಡಿಕೊಂಡಿದ್ದರು. ಕೃಷಿಗಾಗಿ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೂ 3 ಲಕ್ಷ, ಪತ್ನಿ ಎಚ್.ಎ.ಆಶಾ ಅವರ ಹೆಸರಿನಲ್ಲಿ ರೂ2.5 ಲಕ್ಷ, ಮಗಳು ತಪಸ್ಯ ಅವರ ಹೆಸರಿನಲ್ಲಿ ರೂ 2.5 ಲಕ್ಷ ಮತ್ತು ಕೊಟ್ಟಿಗೆಹಾರ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ 50 ಸಾವಿರ ಸಾಲ ಪಡೆದು ಕೃಷಿ ಮಾಡಿದ್ದರು. ಆದರೆ ಕಳೆದ ಎರಡು ವರ್ಷದಿಂದ ವಿಪರೀತ ಮಳೆಯಿಂದ ಅತಿವೃಷ್ಠಿಯಾಗಿ ಬೆಳೆ ಹಾನಿಯಾಗಿದ್ದು ಯಾವುದೇ ಫಸಲು ಕೈಗೆ ಸಿಗದೇ ಬ್ಯಾಂಕ್ ಸಾಲ ತೀರಿಸಲಾಗದೇ ಮನನೊಂದು ಶುಕ್ರವಾರ ಬೆಳಗ್ಗೆ ಮನೆಯ ಬಳಿ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಎಚ್.ಎ.ಆಶಾ ಬಾಳೂರು ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತ ನಿಧನಕ್ಕೆ ಸಂತಾಪ ಕೃಷಿ ರೈತರಾದ ಬಿ.ಸಿ.ತಿಲಕ್ ಅವರ ನಿಧನಕ್ಕೆ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಹಾಗೂ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author