लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸಿದ ವಕೀಲ ಮೋಹನ್ ಕುಮಾರ್ ದಾನಪ್ಪ

1 min read
Featured Video Play Icon

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸಿದ ವಕೀಲ ಮೋಹನ್ ಕುಮಾರ್ ದಾನಪ್ಪ

ಬೆಂಗಳೂರು: ದಿನಾಂಕ:-21-12-2020 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಕಂದಾಯ ಇಲಾಖೆಯು

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ನೂತನ ವಿಜಯನಗರ ಜಿಲ್ಲೆ ರಚಿಸಿ ವಿಜಯನಗರ ಜಿಲ್ಲೆಯಿಂದ ಕಂಪ್ಲಿಯನ್ನ ಕೈ ಬಿಟ್ಟು ಬಳ್ಳಾರಿ ಜಿಲ್ಲೆಯಲ್ಲೇ ಮುಂದುವರೆಸಿ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನ ಖಂಡಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಟಿ. ಎಂ. ವಿಜಯ್ ಭಾಸ್ಕರ್, ಐಎಎಸ್, ರವರಿಗೆ ಮನವಿ ಪತ್ರ ಸಲ್ಲಿಸುವ ಮುಖಾಂತರ ಆಕ್ಷೇಪಣೆ ಸಲ್ಲಿಸಿದ ಕಂಪ್ಲಿ ನಗರ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಮೋಹನ್ ಕುಮಾರ್ ದಾನಪ್ಪ!

ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿದ್ದ 11 ತಾಲೂಕುಗಳಾದ ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ, ಹೊಸಪೇಟೆ, ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿಗಳಿದ್ದು ಬಳ್ಳಾರಿ ನಗರವು ಜಿಲ್ಲಾ ಕೇಂದ್ರ ಸ್ಥಾನವಾಗಿದ್ದು ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೊಸಪೇಟೆಗಳು ಜಿಲ್ಲಾ ಕೇಂದ್ರ ಸ್ಥಾನವಾದ ಬಳ್ಳಾರಿ ನಗರದಿಂದ ಸುಮಾರು 250 ಕೀ.ಮೀಟರ್ ನಷ್ಟು ಭೌಗೋಳಿಕವಾಗಿ ದೂರವಿರುವ ಕಾರಣ ಪಶ್ಚಿಮ ತಾಲೂಕುಗಳಿಗೆ ಹತ್ತಿರವಾಗುವ ಕಂಪ್ಲಿಯು ಸೇರಿದಂತೆ ಹೊಸಪೇಟೆ ನಗರವನ್ನ ವಿಜಯನಗರ ಜಿಲ್ಲಾ ಕೇಂದ್ರಸ್ಥಾನವನ್ನಾಗಿಸಿ ಕಳೆದ ಸಚಿವ ಸಂಪುಟ ಸಭೆ ಉಪ ಸಮಿತಿಯಲ್ಲಿ ಕಂಪ್ಲಿ ತಾಲೂಕು ಸೇರಿದಂತೆ ನಕಾಶೆಯನ್ನು ಬಿಡುಗಡೆ ಮಾಡಿ ನೂತನ ವಿಜಯನಗರ ಜಿಲ್ಲೆ ಎಂದು ಘೋಷಿಸಿದ್ದು ಕಂಪ್ಲಿ ತಾಲೂಕಿನ ಜನರಿಗೆ ಅತೀವ್ರ ಸಂತಷದ ಸಂಗತಿಯಾಗಿರುತ್ತದೆ, ಆದರೆ ತದನಂತರ ನೂತನ ಜಿಲ್ಲೆಯ ಒಳಗೊಂಡಿದ್ದ ಕಂಪ್ಲಿಯನ್ನ ಕೈಬಿಟ್ಟು ವಿಜಯನಗರ ಜಿಲ್ಲೆಯನ್ನು ಘೋಷಿಸಿದ್ದು ಈ ಭಾಗದ ಜನರಿಗೆ ಆಕ್ರೋಶಕ್ಕೆ ಕಾರಣವಾಗಿರುತ್ತದೆ, ಕಂಪ್ಲಿಯು ಈ ಹಿಂದೆ 11 ರಿಂದ 14ನೇ ಶತಮಾನಗಳಲ್ಲಿ ಕಂಪ್ಲಿ ರಾಜ್ಯ ಎಂಬ ಚಿಕ್ಕ ರಾಜ್ಯವೊಂದರ ರಾಜಧಾನಿಯಾಗಿದ್ದು 1858 ರವರೆಗೆ ಕಂಪ್ಲಿಯು ತಾಲೂಕು ಕೇಂದ್ರಸ್ಥಾನವಾಗಿದ್ದು ಅಂದಿನ ಕಂಪ್ಲಿ ತಾಲೂಕಿನಲ್ಲಿ ಈಗಿನ ಹೊಸಪೇಟೆಯನ್ನು ಹೋಬಳಿಯಾಗಿತ್ತು ನಂತರ 1859 ರಲ್ಲಿ ತಾಲೂಕು ಕೇಂದ್ರವಾಗಿದ್ದ ಕಂಪ್ಲಿಯನ್ನ ಹೊಸಪೇಟೆಗೆ ಬದಲಾಯಿಸಿದ್ದು ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲಾಗಿದ್ದ ಕಂಪ್ಲಿಯು 1859 ರಿಂದ 2017 ರವರವರೆಗೆ ಹೊಸಪೇಟೆ ತಾಲೂಕು ವ್ಯಾಪ್ತಿಯ ಹೋಬಳಿಯಾಗಿ ಕಾರ್ಯನಿರ್ವಹಿಸಿದ ಹೆಮ್ಮೆಯ ಇತಿಹಾಸ ಹೊಂದಿರುವ ಕಂಪ್ಲಿಯು 2017 ರಲ್ಲಿ ನೂತನ ತಾಲೂಕಾಗಿದ್ದರು ನ್ಯಾಯಾಲಯ , ಕಂದಾಯ ವಿಭಾಗ ಕಛೇರಿ , ಪ್ರಾದೇಶಿಕ ಸಾರಿಗೆ ಕಛೇರಿ , ಮಾರ್ಕೇಟಿಂಗ್ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಛೇರಿಯು ಹಾಗೂ ಸರ್ಕಾರದ ಅನೇಕ ಕಛೇರಿಗಳು, ಶಿಕ್ಷಣ ಸಂಸ್ಥೆಗಳು, ಹೊಸಪೇಟೆಯಲ್ಲಿಯೆ ಇದ್ದು ಎಂದಿನಂತೆ ಕೆಲಸ ಕಾರ್ಯಗಳಿಗೆ ಹೊಸಪೇಟೆಯನ್ನೇ ಅವಲಂಬಿಸಿರುತ್ತಾರೆ, ಕಂಪ್ಲಿ ಮತ್ತು ಹೊಸಪೇಟೆಗೆ ಅಂದಿನಿಂದ ಪ್ರಸ್ತುತದವರೆಗೆ ಅವಿನಾಭಾವ ಸಂಬಂಧ ಹೊಂದಿದ್ದು ಹೊಸಪೇಟೆಯು ಕಂಪ್ಲಿ ತಾಲೂಕಿನಿಂದ ಕೇವಲ 28 ಕೀಲೋ ಮೀಟರ್ ಸಮೀಪವಿದ್ದು ಅಲ್ಲದೆ ಹೊಸಪೇಟೆ ತಾಲೂಕಿನ ಸರಹದ್ದಿನಿಂದ ಕಂಪ್ಲಿಯು ಕೇವಲ 5 ಕೀ ಮೀ ಅಂತರವಿದ್ದು ಕಂಪ್ಲಿಯಿಂದ ಹೊಸಪೇಟೆಗೆ 30 ನಿಮಿಷಗಳಲ್ಲಿ ಸಂಚರಿಸುವ ಸಂಚಾರ ವ್ಯವಸ್ಥೆ ತುಂಬಾ ಅತ್ಯುತ್ತಮವಾಗಿದ್ದು ದಿನದ 24 ಗಂಟೆಯು ಸಂಚರಿಸಲು ಸಾರ್ವಜನಿಕರಿಗೆ ತುಂಬಾ ಅನುಕೂಲವಿದ್ದು ಈ ಭಾಗದ ಜನರಿಗೆ ಸರ್ಕಾರಿ ಸೇವೆ ಪಡೆಯಲು ಯಾವುದೇ ಹೊರೆಯಾಗುತ್ತಿರುವುದಿಲ್ಲಾ , ಆದರೆ ಹೊಸಪೇಟೆಗೆ ( ವಿಜಯನಗರ ಜಿಲ್ಲೆ ) ಸಮೀಪವಿರುವ ಕಂಪ್ಲಿಯನ್ನ ಸುಮಾರು 60 ಕಿಲೋ ಮೀಟರ್ ಗೂ ಅಧಿಕ ದೂರವಿರುವ, ಸಾರ್ವಜನಿಕರಿಗೆ ಅನಾನುಕೂಲವಾಗಿರುವ ಸಂಚಾರ ವ್ಯವಸ್ಥೆ ಹೊಂದಿರುವ, ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗುವ ಬಳ್ಳಾರಿ ಜಿಲ್ಲೆಯಲ್ಲಿಯೇ ಮುಂದುವರೆಸುವ ತಮ್ಮ ತೀರ್ಮಾನ ಅವೈಜ್ಞಾನಿಕವಾಗಿದ್ದು ಮತ್ತು ರಾಜಕೀಯ ಹಿತಾಸಕ್ತಿಗೆ ಈ ತಾಲೂಕಿನ ಜನರಿಗೆ ಅನ್ಯಾಯ ಮಾಡಿರುವುದು ರಾಜಕೀಯ ಷಡ್ಯಂತ್ರವಾಗಿರುತ್ತದೆ, ಸರ್ಕಾರಿ ಸೇವೆ ಮತ್ತು ಆಡಳಿತ ಸಾರ್ವಜನಿಕರಿಗೆ ಸರಳವಾಗಿ ದೊರೆಯುವುದನ್ನ ಇನ್ನಷ್ಟು ಕಠಿಣಗೊಳಿಸಿದ್ದು ಈ ಕೂಡಲೇ ಬಳ್ಳಾರಿ ಜಿಲ್ಲೆಯಿಂದ ಕೈಬಿಟ್ಟು ನೂತನ ವಿಜಯನಗರ ಜಿಲ್ಲೆಗೆ ಈ ಹಿಂದೆ ಘೋಷಿಸಿದಂತೆ ಯಥಾಸ್ಥಿತಿಯಾಗಿ ಕಂಪ್ಲಿ ತಾಲೂಕನ್ನು ಸೇರ್ಪಡಿಸುವಂತೆ ಆಕ್ಷೇಪಣೆಯೊಂದಿಗೆ ಈ ಮೂಲಕ ಮನವಿ ಸಲ್ಲಿಸಲಾಗಿದೆ, ಒಂದು ವೇಳೆ ನಮ್ಮ ಮನವಿಯನ್ನ ಪರಿಗಣಿಸದೇ ಏಕಾಏಕಿ ನಿರ್ಧಾರ ಕೈಗೊಂಡಲ್ಲಿ ಕಂಪ್ಲಿಯನ್ನು ಅನಿರ್ದಿಷ್ಟಾವಧಿಯವರೆಗೂ ಬಂದ್ ಮಾಡಿ ಹಂತ ಹಂತವಾಗಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸುವ ಮೂಲಕ ಮನವಿ  ಮಾಡಿಕೊಳ್ಳಲಾಗಿದೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author