ಗುರುವಿನ ಪಾದಪೂಜೆ ವಿಶೇಷವಾದುದು : ಕೂಡಲಸಂಗಮದ ಜಯಮೃತುಂಜಯ ಶ್ರೀಗಳು #avintvcom
1 min read
ಗುರುವಿನ ಪಾದಪೂಜೆ ವಿಶೇಷವಾದುದು : ಕೂಡಲಸಂಗಮದ ಜಯಮೃತುಂಜಯ ಶ್ರೀಗಳು
ಸುದ್ಧಿ :
ಗುರುವಿನ ಪಾದಪೂಜೆಗೆ ವಿಶೇಷ ಮತ್ತು ವಿಶಿಷ್ಠಸ್ಥಾನವಿದೆ. ಗುರುವಿನ ಪಾದ ಸ್ಪರ್ಶ ಮಾಡಿದರೆ ಮುಕ್ತಿ ಸಿಗುತ್ತದೆ. ಪ್ರತಿಯೊಬ್ಬರಿಗೂ ಗುರುವಿನ ಮೇಲೆ ಅಪಾರ ಭಕ್ತಿ ಇರಬೇಕು ಎಂದು
ಕೂಡಲಸಂಗಮದ ಶ್ರೀ ಮ ನಿ ಪ್ರ ಜ ಜಯಮೃತುಂಜಯ ಮಹಾಸ್ವಾಮಿಗಳು ಇಂದಿಲ್ಲಿ ಹೇಳಿದರು.
ಚಮಕೇರಿಯ ಸಮಾಜಸೇವಕ ಮಹಾದೇವ ಬಿರಾದಾರ ಸ್ವಗೃಹದಲ್ಲಿ ನಡೆದ ಪಾದಪೂಜೆಯನ್ನು ಸ್ವೀಕರಿಸಿ ಮಾತನಾಡಿದರು.
ಗುರು ಮತ್ತು ಪಾದಪೂಜೆ ಅತಿ ಶ್ರೇಷ್ಠವಾದುದು. ನಿರಂತರ ಗುರುವಿನ ಸ್ಮರಣೆ ಕೈಗೊಂಡು ಉತ್ತಮ ಕಾರ್ಯಗಳನ್ನು ಕೈಗೊಂಡಾಗ ಯಾವುದೇ ವಿಘ್ನಗಳು ಬಾರದೆ ಒಳ್ಳೆಯ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ವಿಶೇಷ ಪೂಜೆ, ಅಭಿಷೇಕ ಮತ್ತು ಬಿಲ್ವ ಪತ್ರಿ, ಹೂವುಗಳ ಪುಷ್ಪಾರ್ಚನೆ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜಮುಖಂಡ ವಿಜುಗೌಡ ಪಾಟೀಲ, ಮುರುಗೇಶ ಸತ್ತಿ, ಬರಮಾ ಪೂಜಾರಿ, ಬಸಪ್ಪ ಮುಲ್ಯಾರ, ಮಹಾದೇವ ಬಿರಾದಾರ, ಸದಾಶಿವ ಬಿರಾದಾರ ಸೇರಿದಂತೆ ಇತರರು ಇದ್ದರು.