ಉಳವಿಯಿಂದ ಶಿವಪುರ ಮಾರ್ಗವಾಗಿ ತೂಗುಸೇತುವೆಗೆ ಇರುವ ಮುಖ್ಯ ರಸ್ತೆ ಅಭಿವೃದ್ಧಿ #avintvcom
1 min read
ಉಳವಿಯಿಂದ ಶಿವಪುರ ಮಾರ್ಗವಾಗಿ ತೂಗುಸೇತುವೆಗೆ ಇರುವ ಮುಖ್ಯ ರಸ್ತೆ ಅಭಿವೃದ್ಧಿಪಡಿಸಿ: ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ
ಹೌದು ಉತ್ತರಕನ್ನಡ ಜಿಲ್ಲೆಯ ಜೋಯ್ಡಾ ತಾಲ್ಲೂಕಿನ ಉಳವಿ ಧಾರ್ಮಿಕ ಕ್ಷೇತ್ರವು ಇಡೀ ರಾಷ್ಟ್ರದಲ್ಲಿ ಹೆಸರು ವಾಸಿಯಾಗಿದೆ. ಆದರೇ ಇಂತಹ ಧಾರ್ಮಿಕ ಕ್ಷೇತ್ರದ ಸಮಗ್ರವಾದ ಅಭಿವೃದ್ಧಿಗೆ ಅರಣ್ಯ ಇಲಾಖೆ ನಿಯಮಗಳು ಹಾಗೂ ಪರಿಸರವಾದಿಗಳು ಪದೇ ಪದೇ ಅಡ್ಡಗಾಲು ಆಗುತ್ತಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ, ಶಾಲೆಗಳ ಅಭಿವೃದ್ಧಿ, ಬಸ್ ವ್ಯವಸ್ಥೆ ಹಾಗೂ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಸರವಾದಿಗಳೇ ಅಡ್ಡಗಾಲು ಆದರೇ ಎಂಬ ಅನುಮಾನ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಉಳವಿ ಗ್ರಾಮ ಪಂಚಾಯಿತಿಯಿಂದ ಶಿವಪುರ ಗ್ರಾಮದ ಮಾರ್ಗವಾಗಿ ತೂಗು ಸೇತುವೆಗೆ ಇರುವ ಮುಖ್ಯ ರಸ್ತೆಯ ಅಭಿವೃದ್ಧಿಗೆ 3 ವರ್ಷಗಳ ಹಿಂದೆ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಲೋಕೋಪಯೋಗಿ ಅನುದಾನದ ಅಡಿಯಲ್ಲಿ 12 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭ ಮಾಡಿತ್ತು. ಆದರೇ ಪರಿಸರವಾದಿಗಳು ದೆಹಲಿ ಮಟ್ಟದಲ್ಲಿ ಈ ಕಾಮಗಾರಿಗೆ ತಡೆ ಹಿಡಿಯುವಂತೆ ಮನವಿ ಸಲ್ಲಿಸಿದ್ದರಿಂದ ಕಳೆದ ಎರಡು ವರ್ಷಗಳಿಂದ ಈ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಬಿಟ್ಟಿದೆ. ಇದರಿಂದ ದಿನನಿತ್ಯ ಈ ರಸ್ತೆಯ ಮೂಲಕ ಸಂಚಾರ ಮಾಡುವ ಈ ಭಾಗದ ಗ್ರಾಮಗಳ ನಿವಾಸಿಗಳು, ಪ್ರವಾಸಿಗರಿಗೆ ಬಾರಿ ತೊಂದರೆ ಆಗುತ್ತಿದ್ದು, ದಿನ ನಿತ್ಯ ಅವಘಡಗಳು ಹೆಚ್ಚಾಗುತ್ತಿವೆ. ಆದ್ದರಿಂದ ಇತ್ತೀಚೆಗೆ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಭೇಟಿಕೊಟ್ಟು ಇಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಆಗ್ರಹ ಮಾಡಿದರು ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು ಹಾಗೂ ಹೋರಾಟಗಾರರು