ದೇಶಾದ್ಯಂತ ಮಾರಣಾಂತಿಕ ಕರೊನಾ ವೈರಸ್ ಹರಡುವುದನ್ನು ತಡೆಯಲು ಸಾರ್ವಜನಿಕರು #avintvcom
1 min read
ರೋಣ :ಕೋವಿಡ್ -19 ಜನ ಜಾಗೃತಿ ಅಭಿಯಾನ
ರೋಣ : ದೇಶಾದ್ಯಂತ ಮಾರಣಾಂತಿಕ ಕರೊನಾ ವೈರಸ್ ಹರಡುವುದನ್ನು ತಡೆಯಲು ಸಾರ್ವಜನಿಕರು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ರೋಗ ಹರಡದಂತೆ ಕ್ರಮವಹಿಸಿಕೊಳ್ಳಬೇಕೆಂದು ತಾಲೂಕಿನ ಗೃಹರಕ್ಷಕ ಘಟಕ ವತಿಯಿಂದ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಜನ ಜಾಗೃತಿ ಕೋವಿಡ್ -19 ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು
ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಗೃಹರಕ್ಷಕ ದಳದ ಮುಖ್ಯಸ್ಥರಾದ ಶ್ರೀ ಅಯ್ಯಪ್ಪ ಕಂಠಿ ಮಾತನಾಡಿ
ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು , ಕಡ್ಡಾಯವಾಗಿ ಸ್ಯಾನಿಟೈಸರ್, ಮಾಸ್ಕ್ ಬಳಸಬೇಕು , ಸೋಂಕು ಹರಡದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಕಚೇರಿಗೆ ಬರುವ ಸಾರ್ವಜನಿಕರಿಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಗೃಹರಕ್ಷಕ ಸಿಬ್ಬಂದಿಗಳಾದ ಶ್ರೀ ಜಿ ಕೆ ಬಡಿಗೇರ ,ಆಯ್.ಎಸ್ ಹುಣಸಿಮರದ ,ವ್ಹಿ ಎಂ ಮುರಗಿ ,ಜೆ ಬಿ ಮಡಿವಾಳರ ,ಜಿ ಎಚ್ ರಡ್ಡೇರ ಮುಂತಾದವರು ಪಾಲ್ಗೊಂಡಿದ್ದರು
ವರದಿ :ಮಹೇಶ ಅಚ್ಚಿನಗೌಡ್ರ